ಪಹಲ್ಗಾಮ್ ದಾಳಿ: “ಭಯೋತ್ಪಾದಕರು ಪಾಕ್‌ನಿಂದ ಬಂದಿದ್ದಕ್ಕೆ ಎನ್‌ಐಎ ಬಳಿ ಸಾಕ್ಷಿ ಇದೆಯೇ ?” – ಚಿದಂಬರಂರ ವಿವಾದಾತ್ಮಕ ಪ್ರಶ್ನೆ

ಕಾಂಗ್ರೆಸ್ ನಾಯಕನಿಂದ ರಾಷ್ಟ್ರಘಾತಕ ಪ್ರಶ್ನೆ!

(ಎನ್‌ಐಎ ಎಂದರೆ ರಾಷ್ಟ್ರೀಯ ತನಿಖಾ ದಳ)

ನವದೆಹಲಿ – ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಭಯೋತ್ಪಾದಕರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ನಮಗೆ ಹೇಗೆ ಗೊತ್ತಾಯಿತು? ಎನ್‌ಐಎ ಬಳಿ ಪುರಾವೆ ಇದೆಯೇ? ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ಖೇದಕರ ಪ್ರಶ್ನೆ ಕೇಳಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ‘ಆಪರೇಷನ್ ಸಿಂಧೂರ್’ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುವ ಸ್ವಲ್ಪ ಮೊದಲು ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.

ಒಂದು ಸಂದರ್ಶನದಲ್ಲಿ ಚಿದಂಬರಂ, ‘ರಾಷ್ಟ್ರೀಯ ತನಿಖಾ ದಳ ಈ ವಾರ ಏನು ಮಾಡಿದೆ ಎಂದು ಹೇಳಲು ಸಿದ್ಧವಾಗಿಲ್ಲ. ಅದು ಭಯೋತ್ಪಾದಕರನ್ನು ಗುರುತಿಸಿದೆಯೇ? ಅಥವಾ ಅವರು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಪತ್ತೆಹಚ್ಚಿದೆಯೇ? ಅವರು ದೇಶದೊಳಗಿನ ಭಯೋತ್ಪಾದಕರಾಗಿರಬಹುದು ಎಂದು ಯಾರಿಗೆ ಗೊತ್ತು? ಅವರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ನೀವು ಏಕೆ ಊಹಿಸುತ್ತಿದ್ದೀರಿ? ಇದಕ್ಕೆ ಯಾವುದೇ ಪುರಾವೆ ಇಲ್ಲ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಕಾಂಗ್ರೆಸ್ ನಾಯಕರು ತಮ್ಮ ಸರಕಾರ ಇದ್ದಾಗ ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ನಿಷ್ಕ್ರಿಯರಾಗಿದ್ದರು ಮತ್ತು ಈಗ ಯಾರಾದರೂ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದರೆ, ಅವರಿಗೆ ದುಃಖವಾಗುತ್ತಿದೆ ಎಂಬುದು ಈ ಪ್ರಶ್ನೆಯಿಂದ ತಿಳಿಯುತ್ತದೆ!
  • ಹಿಂದೂಗಳನ್ನು ಭಯೋತ್ಪಾದಕರು ಎಂದು ಬಿಂಬಿಸಲು ಶತಪ್ರಯತ್ನ ಮಾಡಿದ ಕಾಂಗ್ರೆಸ್ ನಾಯಕರಿಂದ ಇಂತಹ ಪ್ರಶ್ನೆಗಳು ಬರುವುದು ಆಶ್ಚರ್ಯಕರವಲ್ಲ!