ಅಸ್ಸಾಂನಲ್ಲಿ ‘ಶ್ರೀ ಸೂರ್ಯ ಪಹಾಡ್’ ಹೆಸರನ್ನು ‘ಕುದರತ್‌ಪುರ’ ಎಂದು ಬದಲಾಯಿಸಿದ ಮುಸಲ್ಮಾನರು !

ಗುವಾಹಾಟಿ (ಅಸ್ಸಾಂ) – ಅಸ್ಸಾಂನ ಗೋಲಪಾರಾ ಜಿಲ್ಲೆಯ ಪವಿತ್ರ ‘ಶ್ರೀ ಸೂರ್ಯ ಪಹಾಡ್’ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಅತಿಕ್ರಮಣ ನಡೆದಿದೆ. ಸ್ಥಳೀಯ ಹಿಂದೂಗಳು, ಪ್ರಸ್ತುತ ಈ ಬೆಟ್ಟದ ಮೇಲೆ ಕನಿಷ್ಠ 40 ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಅವರು ಈ ಪವಿತ್ರ ಸ್ಥಳದ ಹೆಸರನ್ನು ‘ಕುದರತ್‌ಪುರ’ ಎಂದು ಬದಲಾಯಿಸಿದ್ದು, ಅಲ್ಲಿ ಮಸೀದಿಗಳು ಮತ್ತು ಮದರಸಾಗಳನ್ನು ನಿರ್ಮಿಸಿದ್ದಾರೆ, ಎಂದು ಹೇಳಿದರು.

ಮಾಧ್ಯಮ ವರದಿಗಳ ಪ್ರಕಾರ, ಈ ಅತಿಕ್ರಮಣಕಾರರು ದಕ್ಷಿಣ ಅಸ್ಸಾಂನ ವಿವಿಧ ಜಿಲ್ಲೆಗಳಿಂದ ಅಕ್ರಮವಾಗಿ ಇಲ್ಲಿಗೆ ಬಂದು ನೆಲೆಸಿದ್ದಾರೆ ಮತ್ತು ‘ಹಜರತ್ ಶೇಖ್ ಅಲ್ಲಾವುದ್ದೀನ್’ ಹೆಸರಿನಲ್ಲಿ ‘ಹಾಫಿಜಾ ಮದರಸಾ’ ಸ್ಥಾಪಿಸಿದ್ದಾರೆ.

ಸಂಪಾದಕೀಯ ನಿಲುವು

ಪಶ್ಚಿಮ ಬಂಗಾಳದಂತೆ ಮುಸ್ಲಿಮರ ಪ್ರಾಬಲ್ಯದ ಹಾದಿ ಹಿಡಿಯುತ್ತಿರುವ ಅಸ್ಸಾಂ! ಈ ಪರಿಸ್ಥಿತಿಯು ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತೋರಿಸುತ್ತದೆ!