‘ಯೂತ್ ಫಾರ್ ಪನೂನ್ ಕಾಶ್ಮೀರ್’ನಿಂದ ‘ಹಿಂದೂ ರಾಷ್ಟ್ರ ಕಿ ಹುಂಕಾರ, ಪನೂನ್ ಕಾಶ್ಮೀರ್ ಹೋ ಸಾಕಾರ’ ಘೋಷಣೆಯೊಂದಿಗೆ ಆಯೋಜನೆ!
(ಪನೂನ್ ಕಾಶ್ಮೀರ್ ಎಂದರೆ ನಮ್ಮದು, ಹಿಂದೂಗಳ ಕಾಶ್ಮೀರ್)

ಜಮ್ಮು (ಜಮ್ಮು-ಕಾಶ್ಮೀರ) – ಜುಲೈ 13 ರಂದು ಇಲ್ಲಿ ‘ರಾಷ್ಟ್ರೀಯ ಕಾಶ್ಮೀರಿ ಹಿಂದೂ ಅಧಿವೇಶನ’ ನಡೆಯಲಿದೆ. ‘ಯೂತ್ ಫಾರ್ ಪನೂನ್ ಕಾಶ್ಮೀರ್’ ಸಂಘಟನೆಯು ಈ ಅಧಿವೇಶನವನ್ನು ಆಯೋಜಿಸಿದೆ ಮತ್ತು ಹಿಂದೂ ಜನಜಾಗೃತಿ ಸಮಿತಿಯೂ ಇದರಲ್ಲಿ ಭಾಗವಹಿಸಲಿದೆ. ಭಾರತದಾದ್ಯಂತದ ಹಿಂದುತ್ವನಿಷ್ಠ ನಾಯಕರು, ಸಂತರು, ಚಿಂತಕರು, ಕಾರ್ಯಕರ್ತರು ಇಲ್ಲಿ ಒಟ್ಟುಗೂಡಲಿದ್ದಾರೆ. ಈ ಅಧಿವೇಶನವು ಕೇವಲ ಭಾಷಣಗಳಿಗಾಗಿ ಅಲ್ಲ, ಬದಲಿಗೆ ಏಕತೆಗಾಗಿ ನಡೆಯುತ್ತಿದೆ. ಕಾಶ್ಮೀರಿ ಹಿಂದೂಗಳ ನರಮೇಧದ ಸತ್ಯವನ್ನು ಎದುರಿಸಲು ಸಿದ್ಧತೆಗಾಗಿ ಮತ್ತು ನಮ್ಮ ಮಾತೃಭೂಮಿಯಲ್ಲಿ ‘ಪನೂನ್ ಕಾಶ್ಮೀರ್’ ಅನ್ನು ಪುನಃಸ್ಥಾಪಿಸಲು ಈ ಅಧಿವೇಶನದ ಮೂಲಕ ರಾಷ್ಟ್ರವನ್ನು ಸಂಘಟಿಸಲಾಗುವುದು ಎಂದು ‘ಯೂತ್ ಫಾರ್ ಪನೂನ್ ಕಾಶ್ಮೀರ್’ನ ಶಿಖರ ಸಮಿತಿಯ ಅಧ್ಯಕ್ಷರಾದ ಶ್ರೀ. ರಾಹುಲ ಕೌಲ್ ಅವರು ‘ಸನಾತನ ಪ್ರಭಾತ’ಗೆ ಮಾಹಿತಿ ನೀಡಿದರು.
🚨 Panun Kashmir Convention TOMORROW in Jammu! 🇮🇳
📍 Abhinav Theatre | 13 July | 9:30 AM
🕉️ Organised by @Y4PK_Homeland
Motto: “Hindu Rashtra ki Hunkar, Panun Kashmir Ho Sakar!” 🔥
🎤 Saints, Hindu thinkers & activists from across Bharat to speak
Sadguru Dr. Charudatta… https://t.co/rONTRh80J3 pic.twitter.com/3NYwIRUTsI
— Sanatan Prabhat (@SanatanPrabhat) July 11, 2025
ಅಧಿವೇಶನದಲ್ಲಿ ಅನೇಕ ಪ್ರಖ್ಯಾತ ಹಿಂದೂ ಚಿಂತಕರೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಸಹ ಭಾಷಣ ಮಾಡಲಿದ್ದಾರೆ.
ಈ ಅಧಿವೇಶನದ ಘೋಷಣಾ ವಾಕ್ಯ – “ಹಿಂದೂ ರಾಷ್ಟ್ರ ಕಿ ಹುಂಕಾರ, ಪನೂನ್ ಕಾಶ್ಮೀರ್ ಹೋ ಸಾಕಾರ!” |
ಜಿಹಾದ್ನ ಮೊದಲ ಬಲಿಪಶುಗಳನ್ನು ಮರೆಯುವ ರಾಷ್ಟ್ರವು ನೈತಿಕ ಸ್ಪಷ್ಟತೆಯ ದಾವೆ ಮಾಡಲು ಸಾಧ್ಯವಿಲ್ಲ!
ಈ ಅಧಿವೇಶನವು ಒಂದು ಸಭ್ಯತೆಯ ಪ್ರಮುಖ ಚಿಹ್ನೆಯಾಗಿದೆ. ‘ಪನೂನ್ ಕಾಶ್ಮೀರ್’ನ ನಿರ್ಮಾಣವು ಭಾರತದ ಅಪೂರ್ಣ ‘ಹಿಂದೂ ನ್ಯಾಯ ಯೋಜನೆ’ಯ ಆಧಾರವಾಗಿದೆ. ಜಿಹಾದ್ನ ಮೊದಲ ಬಲಿಪಶುಗಳನ್ನು ಮರೆಯುವ ರಾಷ್ಟ್ರವು ನೈತಿಕ ಸ್ಪಷ್ಟತೆಯ ದಾವೆ ಮಾಡಲು ಸಾಧ್ಯವಿಲ್ಲ. ‘ಪನೂನ್ ಕಾಶ್ಮೀರ್ ಒಂದು ರಾಷ್ಟ್ರೀಯ ಅವಶ್ಯಕತೆ’ ಎಂದು ಆಯೋಜನಾ ಸಮಿತಿ ಹೇಳಿದೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ