ಜಾಹೀರಾತಿನಲ್ಲಿ ‘ಡಾಬರ್’ ಚ್ಯವನಪ್ರಾಶ್ ಅನ್ನು ಕೀಳಾಗಿ ತೋರಿಸಿದ್ದಕ್ಕಾಗಿ ಕ್ರಮ

ನವದೆಹಲಿ – ಚ್ಯವನಪ್ರಾಶ್ ಒಂದು ಸಾಂಪ್ರದಾಯಿಕ ಆಯುರ್ವೇದ ಔಷಧವಾಗಿದೆ. ಇದು ಔಷಧಗಳು ಮತ್ತು ಸೌಂದರ್ಯ ವರ್ಧಕಗಳ ಕಾಯಿದೆಯ ನಿಯಮಗಳ ಪ್ರಕಾರ ಸಾಬೀತುಪಡಿಸಬೇಕು. ಇತರೆ ಕಂಪನಿಗಳ ಚ್ಯವನಪ್ರಾಶ್ ಗಳನ್ನು ಸಾಮಾನ್ಯ ಎಂದು ಕರೆಯುವುದು ತಪ್ಪು ಮತ್ತು ದಾರಿತಪ್ಪಿಸುವಂತದ್ದು ಎಂದು ದೆಹಲಿ ಉಚ್ಚನ್ಯಾಯಾಲಯವು ಯೋಗಋಷಿ ರಾಮದೇವ್ ಬಾಬಾ ಅವರ ‘ಪತಂಜಲಿ’ ಚ್ಯವನಪ್ರಾಶ್ ನ ಜಾಹೀರಾತಿಗೆ ತಡೆ ನೀಡಿದೆ. ‘ಪತಂಜಲಿ’ ಕಂಪನಿಯು ‘ಡಾಬರ್’ ಚ್ಯವನಪ್ರಾಶ್ ವಿರುದ್ಧ ಯಾವುದೇ ನಕಾರಾತ್ಮಕ ಅಥವಾ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರದರ್ಶಿಸಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ. ‘ಡಾಬರ್’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತಡೆಯಾಜ್ಞೆ ಹೇರಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 14 ರಂದು ನಡೆಯಲಿದೆ.
ಜಾಹೀರಾತಿನಲ್ಲಿ ಏನಿದೆ?
ಯೋಗಋಷಿ ರಾಮದೇವ್ ಬಾಬಾ ಅವರು ಸ್ವತಃ ಈ ಜಾಹೀರಾತಿನಲ್ಲಿ, “ಆಯುರ್ವೇದ ಮತ್ತು ವೇದಗಳ ಜ್ಞಾನವಿಲ್ಲದವರು ಸಾಂಪ್ರದಾಯಿಕ ಚ್ಯವನಪ್ರಾಶ್ ಅನ್ನು ಹೇಗೆ ತಯಾರಿಸಬಹುದು?” ಎಂದು ಹೇಳುತ್ತಿರುವುದು ಕಾಣುತ್ತದೆ.
ಡಾಬರ್ ಈ ಜಾಹೀರಾತಿನ ಬಗ್ಗೆ, “‘ಪತಂಜಲಿ’ಯ ಜಾಹೀರಾತಿನಲ್ಲಿ ಇತರ ಕಂಪನಿಗಳ ಉತ್ಪನ್ನಗಳಿಂದ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು ಎಂದು ಹೇಳಲಾಗಿದೆ. ಇಂತಹ ವಿವಾದಾತ್ಮಕ ಜಾಹೀರಾತುಗಳಿಗಾಗಿ ‘ಪತಂಜಲಿ’ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಗಳು ಈಗಾಗಲೇ ನಡೆಯುತ್ತಿವೆ. ಪದೇ-ಪದೇ ಅವರು ಇಂತಹ ಜಾಹೀರಾತುಗಳನ್ನು ತರುತ್ತಿದ್ದಾರೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ” ಎಂದು ಹೇಳಿದೆ.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !