ಜಾಹೀರಾತಿನಲ್ಲಿ ‘ಡಾಬರ್’ ಚ್ಯವನಪ್ರಾಶ್ ಅನ್ನು ಕೀಳಾಗಿ ತೋರಿಸಿದ್ದಕ್ಕಾಗಿ ಕ್ರಮ

ನವದೆಹಲಿ – ಚ್ಯವನಪ್ರಾಶ್ ಒಂದು ಸಾಂಪ್ರದಾಯಿಕ ಆಯುರ್ವೇದ ಔಷಧವಾಗಿದೆ. ಇದು ಔಷಧಗಳು ಮತ್ತು ಸೌಂದರ್ಯ ವರ್ಧಕಗಳ ಕಾಯಿದೆಯ ನಿಯಮಗಳ ಪ್ರಕಾರ ಸಾಬೀತುಪಡಿಸಬೇಕು. ಇತರೆ ಕಂಪನಿಗಳ ಚ್ಯವನಪ್ರಾಶ್ ಗಳನ್ನು ಸಾಮಾನ್ಯ ಎಂದು ಕರೆಯುವುದು ತಪ್ಪು ಮತ್ತು ದಾರಿತಪ್ಪಿಸುವಂತದ್ದು ಎಂದು ದೆಹಲಿ ಉಚ್ಚನ್ಯಾಯಾಲಯವು ಯೋಗಋಷಿ ರಾಮದೇವ್ ಬಾಬಾ ಅವರ ‘ಪತಂಜಲಿ’ ಚ್ಯವನಪ್ರಾಶ್ ನ ಜಾಹೀರಾತಿಗೆ ತಡೆ ನೀಡಿದೆ. ‘ಪತಂಜಲಿ’ ಕಂಪನಿಯು ‘ಡಾಬರ್’ ಚ್ಯವನಪ್ರಾಶ್ ವಿರುದ್ಧ ಯಾವುದೇ ನಕಾರಾತ್ಮಕ ಅಥವಾ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರದರ್ಶಿಸಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ. ‘ಡಾಬರ್’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತಡೆಯಾಜ್ಞೆ ಹೇರಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 14 ರಂದು ನಡೆಯಲಿದೆ.
ಜಾಹೀರಾತಿನಲ್ಲಿ ಏನಿದೆ?
ಯೋಗಋಷಿ ರಾಮದೇವ್ ಬಾಬಾ ಅವರು ಸ್ವತಃ ಈ ಜಾಹೀರಾತಿನಲ್ಲಿ, “ಆಯುರ್ವೇದ ಮತ್ತು ವೇದಗಳ ಜ್ಞಾನವಿಲ್ಲದವರು ಸಾಂಪ್ರದಾಯಿಕ ಚ್ಯವನಪ್ರಾಶ್ ಅನ್ನು ಹೇಗೆ ತಯಾರಿಸಬಹುದು?” ಎಂದು ಹೇಳುತ್ತಿರುವುದು ಕಾಣುತ್ತದೆ.
ಡಾಬರ್ ಈ ಜಾಹೀರಾತಿನ ಬಗ್ಗೆ, “‘ಪತಂಜಲಿ’ಯ ಜಾಹೀರಾತಿನಲ್ಲಿ ಇತರ ಕಂಪನಿಗಳ ಉತ್ಪನ್ನಗಳಿಂದ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು ಎಂದು ಹೇಳಲಾಗಿದೆ. ಇಂತಹ ವಿವಾದಾತ್ಮಕ ಜಾಹೀರಾತುಗಳಿಗಾಗಿ ‘ಪತಂಜಲಿ’ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಗಳು ಈಗಾಗಲೇ ನಡೆಯುತ್ತಿವೆ. ಪದೇ-ಪದೇ ಅವರು ಇಂತಹ ಜಾಹೀರಾತುಗಳನ್ನು ತರುತ್ತಿದ್ದಾರೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ” ಎಂದು ಹೇಳಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ