ಭಾರತ-ಚೀನಾ ಸಂಬಂಧಗಳಲ್ಲಿ ಜಟಿಲತೆಯನ್ನು ತಪ್ಪಿಸಲು ಉಭಯ ದೇಶಗಳಲ್ಲಿ ಪ್ರಯತ್ನ! – ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೀಜಿಂಗ್ (ಚೀನಾ) – ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಸಕಾರಾತ್ಮಕ ಗತಿಯನ್ನು ಕಾಯ್ದುಕೊಳ್ಳುವ ಮತ್ತು ಉಭಯ ದೇಶಗಳಲ್ಲಿ ಜಟಿಲತೆಯನ್ನು ತಪ್ಪಿಸುವ ಅಗತ್ಯವನ್ನು ನಾವು ಆದ್ಯತೆ ನೀಡಿದ್ದೇವೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೆ ನೀಡಿದ್ದಾರೆ. ಚೀನಾದಲ್ಲಿ ನಡೆದ ‘ಶಾಂಘೈ ಸಹಕಾರ ಸಂಘಟನೆ’ಯ ಸಭೆಯ ಸಂದರ್ಭದಲ್ಲಿ ರಾಜನಾಥ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ ಅವರ ಭೇಟಿಯ ನಂತರ ಸಿಂಗ್ ಅವರು ಈ ಹೇಳಿಕೆ ನೀಡಿದ್ದಾರೆ.

ರಕ್ಷಣಾ ಸಚಿವ ಸಿಂಗ್ ಮಾತು ಮುಂದುವರೆಸಿ, ನಮ್ಮ ನಡುವೆ ರಚನಾತ್ಮಕ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. 6 ವರ್ಷಗಳ ಸುದೀರ್ಘ ಅವಧಿಯ ನಂತರ ಕೈಲಾಸ್ ಮಾನ ಸರೋವರ ಯಾತ್ರೆ ಪುನರಾರಂಭಗೊಂಡಿರುವುದಕ್ಕೆ ನಾನು ಡಾಂಗ್ ಜುನ್ ಅವರ ಬಳಿ ಸಂತೋಷ ವ್ಯಕ್ತಪಡಿಸಿದೆ, ಎಂದು ತಿಳಿಸಿದರು.

ಚೀನಾ ಕೂಡ ಹೇಳಿಕೆ ನೀಡಿದ್ದು, ಚೀನಾ ಭಾರತದೊಂದಿಗೆ ಸಂಘರ್ಷ ನಡೆಸಲು ಬಯಸುವುದಿಲ್ಲ. ಸಂವಾದ ಮತ್ತು ಪರಸ್ಪರ ವಿಶ್ವಾಸವನ್ನು ಹೆಚ್ಚಿಸುವುದು ಚೀನಾದ ಉದ್ದೇಶ ಎಂದು ಹೇಳಿದೆ.