Sonia Gandhi Condemns Israel : ‘ಇರಾನ್ ಮೇಲೆ ದಾಳಿ ಮಾಡುವುದು ಇಸ್ರೇಲ್‌ನ ದ್ವಿಮುಖಿಯಂತೆ!’

  • ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಂದ ‘ದಿ ಹಿಂದೂ’ ಪತ್ರಿಕೆಯಲ್ಲಿ ಬರೆದ ಲೇಖನದಿಂದ ಟೀಕೆ

  • ಗಾಜಾ ಮತ್ತು ಈಗ ಇರಾನ ಮೇಲಿನ ಭಾರತದ ಮೌನ ಆತಂಕಕಾರಿ ಎಂದು ಕೂಡ ಟೀಕೆ

ನವದೆಹಲಿ – ಇಸ್ರೇಲ್ ಸ್ವತಃ ಅಣ್ವಸ್ತ್ರ ಹೊಂದಿರುವ ದೇಶವಾಗಿದೆ; ಆದರೆ ಇರಾನ್‌ ಬಳಿ ಅಣ್ವಸ್ತ್ರಗಳಿಲ್ಲದಿದ್ದರೂ ಇರಾನ್ ಅನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ಇದು ಇಸ್ರೇಲ್‌ನ ದ್ವಿಮುಖಿತನ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ಬರೆದ ಲೇಖನದ ಮೂಲಕ ಟೀಕಿಸಿದ್ದಾರೆ.

‘ಇರಾನ್ ಭಾರತದ ಹಳೆಯ ಸ್ನೇಹಿತ ಮತ್ತು ಇಂತಹ ಪರಿಸ್ಥಿತಿಯಲ್ಲಿ ಭಾರತದ ಮೌನ ಕಳವಳಕಾರಿಯಾಗಿದೆ. ಗಾಜಾದಲ್ಲಿ ನಡೆಯುತ್ತಿರುವ ವಿನಾಶ ಮತ್ತು ಇರಾನ್ ಮೇಲಿನ ದಾಳಿಯ ಬಗ್ಗೆ ಭಾರತವು ಸ್ಪಷ್ಟವಾಗಿ, ಜವಾಬ್ದಾರಿಯುತವಾಗಿ ಮತ್ತು ಬಲವಾದ ಧ್ವನಿಯಲ್ಲಿ ಮಾತನಾಡಬೇಕು. ಇನ್ನೂ ಬಹಳ ತಡವಾಗಿಲ್ಲ’ ಎಂದು ಸೋನಿಯಾ ಗಾಂಧಿ ಹೇಳಿದರು.

ಇಸ್ರೇಲ್ ಶಾಂತಿಯನ್ನು ಕದಡುವ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ!

ಈ ಲೇಖನದಲ್ಲಿ ಸೋನಿಯಾ ಗಾಂಧಿ ಅವರು, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಾಯಕತ್ವದಲ್ಲಿ ಇಸ್ರೇಲ್ ನಿರಂತರವಾಗಿ ಶಾಂತಿಯನ್ನು ಕದಡುವ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ. (ಸೋನಿಯಾ ಗಾಂಧಿ ಎಂದಾದರೂ ಪಾಕಿಸ್ತಾನದ ಬಗ್ಗೆ ಭಾರತದ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆಯೇ? ಅಥವಾ ಲೇಖನ ಬರೆದಿದ್ದಾರೆಯೇ? – ಸಂಪಾದಕರು) ಇದು ಅತ್ಯಂತ ದುರದೃಷ್ಟಕರವಾಗಿದೆ. ಅವರ ಸರಕಾರ ನಿರಂತರವಾಗಿ ಅಕ್ರಮ ವಸಾಹತುಗಳನ್ನು ಹೆಚ್ಚಿಸುತ್ತಿದೆ, ಉಗ್ರಗಾಮಿ ರಾಷ್ಟ್ರೀಯವಾದಿಗಳೊಂದಿಗೆ ಕೆಲಸ ಮಾಡುತ್ತಿದೆ ಮತ್ತು ದ್ವಿ-ರಾಜ್ಯ ಆಯ್ಕೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತಿದೆ. ಇದರಿಂದ ಪ್ಯಾಲೆಸ್ಟೀನಿಯನ್ನರ ದುಃಖ ಹೆಚ್ಚಾಗಿದೆಯಲ್ಲದೆ; ಸಂಪೂರ್ಣ ಪ್ರದೇಶವು ದೀರ್ಘಕಾಲದ ಸಂಘರ್ಷದತ್ತ ತಳ್ಳಲ್ಪಟ್ಟಿದೆ. (ಸೋನಿಯಾ ಗಾಂಧಿಯವರಿಗೆ ಪ್ಯಾಲೆಸ್ಟೀನಿಯಾ ಮುಸಲ್ಮಾನರ ದುಃಖ ಕಾಣುತ್ತದೆ; ಆದರೆ ಹಿಂದೂಗಳದ್ದು ಕಾಣುವುದಿಲ್ಲ! – ಸಂಪಾದಕರು)

ಸಂಪಾದಕೀಯ ನಿಲುವು

  • ಯಾವುದೇ ದೇಶಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯವಿದೆ. ಇರಾನಿನ ಅಣುಬಾಂಬ್ ನಿಂದಾಗಿ ಇಸ್ರೇಲನ ಸ್ವಾತಂತ್ರ್ಯಕ್ಕೆ ಸಂಕಷ್ಟ ಎದುರಾಗುತ್ತಿತ್ತು, ಆದ್ದರಿಂದಲೇ ಇಸ್ರೇಲ್ ಇರಾನ್ ಮೇಲೆ ಮೊದಲೇ ಕ್ರಮ ಕೈಗೊಂಡರೆ ತಪ್ಪೇನು? ಪ್ರತಿಯೊಂದು ದೇಶವು ಗಾಂಧಿಗಿರಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಸೋನಿಯಾ ಗಾಂಧಿಯವರಿಗೆ ಅನಿಸುತ್ತದೆಯೇ?
  • ದೇಶದಲ್ಲಿ, ಹಾಗೆಯೇ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಮೇಲೆ ಮುಸಲ್ಮಾನರಿಂದ ದಾಳಿಗಳಾದಾಗ, ಕಾಂಗ್ರೆಸ್ಸಿಗರ ಮೌನ ಖೇದಕರವಾಗಿರುವುದಿಲ್ಲವೇ? ಹಿಂದೂಗಳ ರಕ್ಷಣೆಯ ಬಗ್ಗೆ ಕಾಂಗ್ರೆಸ್ಸಿಗರಿಗೆ ಎಂದಿಗೂ ಮಾತನಾಡಬೇಕೆಂದು ಅನಿಸುವುದಿಲ್ಲವೇ? ಕಾಶ್ಮೀರಿ ಹಿಂದೂಗಳಿಗಾಗಿ ಕಾಂಗ್ರೆಸ್ ಎಂದಾದರೂ ಕಣ್ಣೀರು ಸುರಿಸಿದೆಯೇ?