|

ಮಥುರಾ (ಉತ್ತರಪ್ರದೇಶ) – ಇಲ್ಲಿನ ಜಗತ್ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜರ ಕೃತಕ ಬುದ್ಧಿಮತ್ತೆಯಿಂದ (AI) ರಚಿಸಲಾದ ಒಂದು ವಿವಾದಾತ್ಮಕ ಚಿತ್ರ ಇತ್ತೀಚೆಗೆ ಪ್ರಸಾರವಾಗಿದ್ದು, ಅದರಲ್ಲಿ ಮಲಗಿರುವ ಸಂತ ಪ್ರೇಮಾನಂದ ಮಹಾರಾಜರ ಪಾದಗಳನ್ನು ರಾಧಾರಾಣಿ ಒತ್ತುವುದು ಮತ್ತು ಶ್ರೀಕೃಷ್ಣ ಕಿಟಕಿಯಿಂದ ರಾಧಾರಾಣಿಯನ್ನು ನೋಡುತ್ತಿರುವಂತೆ ತೋರಿಸಲಾಗಿದೆ. ಇದರ ವಿರುದ್ಧ ಆಕ್ರೋಶದ ಅಲೆ ಎದ್ದಿದ್ದು, ಮಹಾರಾಜರ ಭಕ್ತರು ಅಜ್ಞಾತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟ ವ್ಯಕ್ತಿಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮಹಾರಾಜರ ಭಕ್ತರಾದ ಗೌತಮ ಚಿಲಾನಾ ಅವರು ಮಾತನಾಡಿ, “ನಮ್ಮ ಪೂಜ್ಯ ರಾಧಾರಾಣಿ ಮತ್ತು ಪೂಜ್ಯ ಗುರುದೇವ ಸಂತ ಪ್ರೇಮಾನಂದ ಗೋವಿಂದ ಶರಣ ಮಹಾರಾಜರ ಇಂತಹ ಚಿತ್ರವನ್ನು ಸಹಿಸಲು ಸಾಧ್ಯವಿಲ್ಲ. ಇದರಿಂದ ಸಂತ ಪ್ರೇಮಾನಂದ ಮಹಾರಾಜ ಮತ್ತು ಇತರ ಸಂತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ” ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ಶ್ರದ್ಧಾ ಕೇಂದ್ರಗಳ ಇಂತಹ ಚಿತ್ರಗಳನ್ನು ಮಾಡಿದವರ ವಿರುದ್ಧ ಹೆಚ್ಚಾಗಿ ಪ್ರಕರಣಗಳು ದಾಖಲಾಗುತ್ತವೆ, ಆದರೆ ಇಸ್ಲಾಂಗೆ ಅಗೌರವ ತೋರಿಸಿದರೆ ಅದು ಜೀವಕ್ಕೆ ಅಪಾಯಕಾರಿ ಎಂದು ತಿಳಿದಿರುವಾಗ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಮಾತ್ರ ಧಕ್ಕೆ ಉಂಟಾಗುತ್ತದೆ ಇದರಲ್ಲಿ ಆಶ್ಚರ್ಯವೇನಿದೆ? |
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ