ಸುಶಾಂತ ಸಿಂಗ್ ರಾಜಪೂತ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿದ ಬಗ್ಗೆ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ! – CBI

ಕೇಂದ್ರ ತನಿಖಾ ದಳದಿಂದ ನ್ಯಾಯಾಲಯದಲ್ಲಿ ‘ತನಿಖೆ ಮುಕ್ತಾಯ ವರದಿ’ (ಕ್ಲೋಸರ್ ರಿಪೋರ್ಟ್) ಸಲ್ಲಿಕೆ!

(‘ತನಿಖೆ ಮುಕ್ತಾಯ ವರದಿ’ ಅಂದರೆ, ಆರೋಪಿಯು ಅಪರಾಧ ಮಾಡಿದ್ದಾನೆ ಎಂದು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಗಳಿಲ್ಲದ ಕಾರಣ ತನಿಖಾ ಏಜೆನ್ಸಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿ)

ಮುಂಬಯಿ – ನಟ ಸುಶಾಂತ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳವು 4 ವರ್ಷ, 6 ತಿಂಗಳು ಮತ್ತು 15 ದಿನಗಳ ನಂತರ ಅಂತಿಮ `ಮುಕ್ತಾಯ ವರದಿ’ ಅನ್ನು ಸಲ್ಲಿಸಿದೆ. ಅದರಲ್ಲಿ, “ಸುಶಾಂತ ಸಿಂಗ್ ರಾಜಪೂತ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಲು ಯಾವುದೇ ಸಾಕ್ಷ್ಯಗಳು ದೊರೆತಿಲ್ಲ” ಎಂದು ಏಜೆನ್ಸಿಯು ನ್ಯಾಯಾಲಯಕ್ಕೆ ತಿಳಿಸಿದೆ.

ಸುಶಾಂತ ಸಿಂಗ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ 27 ದಿನಗಳ ಕಾಲ ಜೈಲಿನಲ್ಲಿರಬೇಕಾಯಿತು. ವರದಿಯ ನಂತರ ರಿಯಾ ಅವರ ನ್ಯಾಯವಾದಿ ಸತೀಶ ಮಾನೆಶಿಂದೆ ಅವರು ಮನವಿಯೊಂದನ್ನು ಪ್ರಸಾರ ಮಾಡಿ, “ಈ ಪ್ರಕರಣದಲ್ಲಿ ಅನೇಕ ಸುಳ್ಳು ಕಥೆಗಳನ್ನು ರಚಿಸಲಾಗಿದ್ದರೂ, ರಿಯಾ ಮತ್ತು ಅವರ ಕುಟುಂಬ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡರು” ಎಂದು ನ್ಯಾಯವಾದಿಗಳಿಗೆ ಹೇಳಿದ್ದಾರೆ.