ಬಕ್ರೀದದಂದು ಗೋಹತ್ಯೆ ನಡೆದರೆ ತಾಂಡವ : ಟಿ. ರಾಜಾ ಸಿಂಗ್ ಎಚ್ಚರಿಕೆ

ಭಾಗ್ಯನಗರ (ತೆಲಂಗಾಣ) – ಬರುವ ಜೂನ್ 7 ರಂದು ಬಕ್ರೀದ್ ಹಬ್ಬದಂದು ಹಸು, ಕರು ಮತ್ತು ಎತ್ತುಗಳನ್ನು ಕೊಲ್ಲುವುದಾದರೆ “ತಾಂಡವವಾಗಲಿದೆ” ಎಂದು ಇಲ್ಲಿನ ಗೋಶಾಮಹಲ್ ಕ್ಷೇತ್ರದ ಭಾಜಪ ಶಾಸಕ ಹಾಗೂ ಪ್ರಖರ ಹಿಂದುತ್ವನಿಷ್ಠ ಟಿ. ರಾಜಾ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಅವರು ‘ಝೀ ನ್ಯೂಸ್’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. “ಬಕ್ರೀದ್ ಸಮಯದಲ್ಲಿ ತೆಲಂಗಾಣದಲ್ಲಿ ಮಾತ್ರವಲ್ಲದೆ, ದೇಶದಾದ್ಯಂತ ಕುರಿಗಳ ಬದಲಿಗೆ ಗೋವುಗಳನ್ನು ಬಲಿ ನೀಡಲಾಗುತ್ತದೆ. ಇದರ ವಿರುದ್ಧ ಸರಕಾರದ ಆದೇಶಗಳಿದ್ದರೂ, ಇಂತಹ ಘಟನೆಗಳು ನಡೆಯುತ್ತವೆ” ಎಂದು ಅವರು ಹೇಳಿದರು.

ಟಿ. ರಾಜಾ ಸಿಂಗ್ ಮಾತು ಮುಂದುವರೆಸಿ, ತೆಲಂಗಾಣ ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರವಿದ್ದರೂ, ಒಂದು ನಿರ್ದಿಷ್ಟ ಧರ್ಮದ ಜನರನ್ನು ಮೆಚ್ಚಿಸಲು ಇಲ್ಲಿನ ಕಟುಕರಿಗೆ ಬಕ್ರೀದ್ ಹಬ್ಬದಂದು ಗೋಹತ್ಯೆ ಮಾಡಲು ಬೆಂಬಲ ನೀಡಲಾಗುತ್ತದೆ. ಗೋರಕ್ಷಕರು ಇಂತಹ ಘಟನೆಗಳನ್ನು ತಡೆಯಲು ಹೋದರೆ, ಪೊಲೀಸರು ಗೋರಕ್ಷಕರ ವಿರುದ್ಧವೇ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಹಾಕುತ್ತಾರೆ. ಎ.ಐ.ಎಂ.ಐ.ಎಂ. (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್, ಅಂದರೆ ಅಖಿಲ ಭಾರತ ಮುಸ್ಲಿಂ ಏಕತಾ ಸಂಘ) ಕಾರ್ಪೊರೇಟರ್‌ಗಳು ಮತ್ತು ಪದಾಧಿಕಾರಿಗಳು ಗೋಹತ್ಯೆಯನ್ನು ಮಾಡಲು ಮತ್ತು ಮಾಡುವವರನ್ನು ಬೆಂಬಲಿಸಲು ಮುಂದಾಗುತ್ತಾರೆ, ಎಂದು ಸಿಂಗ್ ಆರೋಪಿಸಿದರು.

ಗೋಹತ್ಯೆ ಮಾಡುವವರಿಗೆ ಸಹಾಯ ಮಾಡುವುದು ಕಾಂಗ್ರೆಸ್‌ನ ಸಂಪ್ರದಾಯ!

ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರವಿದೆ. ಕಾಂಗ್ರೆಸ್ ಸರಕಾರ ಇರುವಾಗಲೆಲ್ಲಾ ಅವರು ಗೋಹತ್ಯೆ ಮಾಡುವವರನ್ನು ಬೆಂಬಲಿಸುತ್ತಾರೆ. ತೆಲಂಗಾಣದಲ್ಲಿಯೂ ಇದೇ ನಡೆಯುತ್ತಿದೆ ಎಂದು ಟಿ. ರಾಜಾ ಸಿಂಗ್ ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಬಕ್ರೀದ್ ಹಬ್ಬದಂದು ಕುರಿ ಅಥವಾ ಮೇಕೆಗಳನ್ನು ಬಲಿ ನೀಡುವ ಸಂಪ್ರದಾಯವಿದ್ದರೂ, ಗೋಹತ್ಯೆ ಏಕೆ ಮಾಡಲಾಗುತ್ತದೆ ಎಂಬುದು ಜಗತ್ತಿಗೆ ತಿಳಿದ ವಿಷಯ. ಇಂತಹ ಘಟನೆಗಳನ್ನು ಯಾವುದೇ ಸರಕಾರ ತಡೆಯಲು ಸಾಧ್ಯವಾಗದಿರುವುದು, ಅವರನ್ನು ಆಯ್ಕೆ ಮಾಡಿದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಇಂತಹ ಹಿಂದೂಗಳು ಮತಾಂಧರಿಂದ ಗಲಭೆಗಳಲ್ಲಿ ಕೊಲ್ಲಲ್ಪಟ್ಟರೆ ಆಶ್ಚರ್ಯವೇನಿಲ್ಲ!