Bangladesh Army Press Briefing : “ಅಧಿಕಾರವನ್ನು ಉರುಳಿಸುವ ನಮ್ಮ ಯಾವುದೇ ಉದ್ದೇಶವಿಲ್ಲ!”

ಬಾಂಗ್ಲಾದೇಶದ ಸೇನೆಯ ಸ್ಪಷ್ಟೀಕರಣ

ಬಾಂಗ್ಲಾದೇಶ ಬ್ರಿಗೇಡಿಯರ್ ಜನರಲ್ ನಜಿಮ್-ಉದ್-ದೌಲಾ.

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಅಧಿಕಾರವನ್ನು ಉರುಳಿಸುವ ಯಾವುದೇ ಉದ್ದೇಶ ನಮಗಿಲ್ಲ ಎಂದು ಬಾಂಗ್ಲಾದೇಶದ ಸೇನೆಯು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದೆ. ಕಳೆದ ಕೆಲವು ದಿನಗಳಿಂದ ಹಂಗಾಮಿ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಸೇನೆಯ ಒತ್ತಡದಿಂದ ರಾಜೀನಾಮೆ ನೀಡಲಿದ್ದಾರೆ ಎಂಬ ಚರ್ಚೆ ನಡೆಯುತ್ತಿತ್ತು. ಈ ಪ್ರಶ್ನೆಗೆ ಸೇನೆಯು ಸ್ಪಷ್ಟೀಕರಣ ನೀಡಿದೆ. ಸೇನೆಯ ಈ ಸ್ಪಷ್ಟೀಕರಣ ಎಷ್ಟರ ಮಟ್ಟಿಗೆ ಸತ್ಯ ಮತ್ತು ಎಷ್ಟು ಸುಳ್ಳು ಎಂಬುದು ಭವಿಷ್ಯದಲ್ಲಿ ತಿಳಿಯಲಿದೆ ಎಂದು ಹೇಳಲಾಗುತ್ತಿದೆ.

1. ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಿಗೇಡಿಯರ್ ಜನರಲ್ ನಜೀಮ್ ಉದ ದೌಲಾ, “ದೇಶದ ಸ್ವಾತಂತ್ರ್ಯ, ಭದ್ರತೆ ಅಥವಾ ಸಾರ್ವಭೌಮತ್ವದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಬಾಂಗ್ಲಾದೇಶದ ಸೇನೆ ಮತ್ತು ಮಹಮ್ಮದ್ ಯೂನಸ್ ನೇತೃತ್ವದ ಹಂಗಾಮಿ ಸರಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ವಿಷಯ ಅತ್ಯಂತ ಸೂಕ್ಷ್ಮವಾಗಿದೆ. ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಎಲ್ಲರಿಗೂ ವಿನಂತಿಸುತ್ತೇನೆ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಂದು ಹೆಜ್ಜೆಯಲ್ಲೂ ಪರಸ್ಪರ ಪೂರಕವಾಗಿದ್ದೇವೆ. ಸೇನೆ ಮತ್ತು ಸರಕಾರ ಒಂದೇ ಕುಟುಂಬದ ಭಾಗವಾಗಿದೆ. ಇಲ್ಲಿ ಯಾವುದೇ ಬಿರುಕು ಮೂಡುವ ಲಕ್ಷಣಗಳಿಲ್ಲ” ಎಂದು ಹೇಳಿದರು.

2. ಇದೇ ವೇಳೆ, ಸೇನೆಯು, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಡುವಿನ ‘ರಾಖೀನ ಕಾರಿಡಾರ್’ (ಸುಸಜ್ಜಿತ ಹೆದ್ದಾರಿ) ಕುರಿತು ಮಾತನಾಡುತ್ತಾ, “ಇದು ಸೂಕ್ಷ್ಮ ವಿಷಯವಾಗಿದೆ. ಬಾಂಗ್ಲಾದೇಶ ಸೇನೆಯು ರಾಷ್ಟ್ರೀಯ ಭದ್ರತೆಗೆ ಅಡ್ಡಿಪಡಿಸುವ ಯಾವುದೇ ಕೃತಿಯಲ್ಲಿ ಎಂದಿಗೂ ಭಾಗಿಯಾಗುವುದಿಲ್ಲ” ಎಂದು ತಿಳಿಸಿದೆ.

ಸಂಪಾದಕೀಯ ನಿಲುವು

ಸೇನೆಯ ಈ ಸ್ಪಷ್ಟೀಕರಣದ ಮೇಲೆ ಹೇಗೆ ವಿಶ್ವಾಸವಿಡಬಹುದು? ಇದೇ ಸೇನೆಯು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮೋಸಗೊಳಿಸಿ ಅಧಿಕಾರದಿಂದ ಕೆಳಗಿಳಿಸಿ ದೇಶದಿಂದ ಪಲಾಯನ ಮಾಡುವಂತೆ ಮಾಡಿತ್ತು!