ಪಾಕಿಸ್ತಾನದ ಸಂಸದ ಸೈಯದ್ ಅಲಿ ಜಾಫರ್ ಅವರ ಪಾಕ್ ಸಂಸತ್ತಿನಲ್ಲಿ ಸರಕಾರಕ್ಕೆ ಮನವಿ!

ಇಸ್ಲಾಮಾಬಾದ್ (ಪಾಕಿಸ್ತಾನ) – “ನಾವು ಈಗಲೇ ನೀರಿನ ಬಿಕ್ಕಟ್ಟನ್ನು ಪರಿಹರಿಸದಿದ್ದರೆ, ನಾವು ಹಸಿವಿನಿಂದ ಸಾಯಬಹುದು. ಇದು ‘ವಾಟರ್ ಬಾಂಬ್’ (ನೀರಿನ ಬಾಂಬ್); ಏಕೆಂದರೆ ಸಿಂಧೂ ಕಣಿವೆ ನಮ್ಮ ಜೀವನಾಡಿಯಾಗಿದೆ. ನಮ್ಮ ದೇಶದ ಮೂರು ಭಾಗದಷ್ಟು ನೀರು ದೇಶದ ಹೊರಗಿನಿಂದ ಬರುತ್ತದೆ. ನಮ್ಮ ಪ್ರತಿ ೧೦ ರಲ್ಲಿ ೯ ಜನರು ಈ ನದಿಯನ್ನು ಅವಲಂಬಿಸಿದ್ದಾರೆ. ನಮ್ಮ ೯೦ ಪ್ರತಿಶತ ಬೆಳೆಗಳಿಗೆ ಈ ನದಿಯಿಂದ ನೀರು ದೊರೆಯುತ್ತದೆ. ಈ ಬಿಕ್ಕಟ್ಟಿನಿಂದ ಆದಷ್ಟು ಬೇಗ ಹೊರಬರಲು ಸರಕಾರ ಕೆಲವು ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಪಾಕಿಸ್ತಾನದ ಸಂಸದ ಸೈಯದ್ ಅಲಿ ಜಾಫರ್ ಅವರು ಪಾಕಿಸ್ತಾನದ ಸಂಸತ್ತಿನಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದ ಕುರಿತು ಒತ್ತಾಯಿಸಿದರು. ಅಲಿ ಜಾಫರ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ‘ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್’ ಪಕ್ಷದ ಸಂಸದರಾಗಿದ್ದಾರೆ.
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation