ಆಪರೇಷನ ಸಿಂಧೂರ’ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ‘ಪಾಕಿಸ್ತಾನ ಮುರ್ದಾಬಾದ್’ ಎಂದು ಘೋಷಣೆ ಕೂಗಿದ 8 ವರ್ಷದ ಬಾಲಕನ ಮೇಲೆ ಮುಸಲ್ಮಾನರಿಂದ ಚಾಕುವಿನಿಂದ ಹಲ್ಲೆ!

ಶಹಜಾನಪುರ (ಉತ್ತರ ಪ್ರದೇಶ) – ಭಾರತೀಯ ಸೈನ್ಯವು ‘ಆಪರೇಷನ ಸಿಂಧೂರ್’ ನಡೆಸಿದ ನಂತರ ಎಲ್ಲರೂ ಪಟಾಕಿ ಸಿಡಿಸಿ ಮತ್ತು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇಲ್ಲೂ ಸಹ ಸಂಭ್ರಮ ಆಚರಿಸಲಾಗುತ್ತಿತ್ತು. ಈ ವೇಳೆ 8 ವರ್ಷದ ಸುರಜಿತ ಹೆಸರಿನ ಬಾಲಕ ‘ಪಾಕಿಸ್ತಾನ ಮುರ್ದಾಬಾದ್’ ಎಂದು ಘೋಷಣೆ ಕೂಗಿದಾಗ ಮೊಹಿದ ಖಾನ ಮತ್ತು ಅವನ ಸ್ನೇಹಿತ ವಾಸಿಮಗೆ ಕೋಪ ಬಂದಿತು. ಅವರು ಬಾಲಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದರು. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ನಂತರ ಸ್ಥಳದಲ್ಲಿದ್ದ ಜನರು ಇಬ್ಬರೂ ಮುಸಲ್ಮಾನರನ್ನು ಹಿಡಿದು ಥಳಿಸಿ ಅವರನ್ನು ಪೊಲೀಸರ ವಶಕ್ಕೆ ನೀಡಲಾಯಿತು.

ಸಂಪಾದಕೀಯ ನಿಲುವು

  • ಒಂದೆಡೆ ಭಾರತೀಯ ಸೈನ್ಯವು ಪಾಕಿಸ್ತಾನದ ಜಿಹಾದಿ ಭಯೋತ್ಪಾದಕರ ಮೇಲೆ ದಾಳಿ ನಡೆಸಿ ಅವರನ್ನು ಕೊಲ್ಲುತ್ತಿದ್ದರೆ, ಭಾರತದಲ್ಲಿಯೇ ಅಂತಹ ಭಯೋತ್ಪಾದಕರ ಬೆಂಬಲಿಗ ಜಿಹಾದಿ ಮುಸಲ್ಮಾನರು ಭಾರತೀಯರನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ! ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಮಯ ಇದೀಗ ಬಂದಿದೆ!
  • ಈ ಘಟನೆಯ ಬಗ್ಗೆ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಕಮ್ಯುನಿಸ್ಟ್ ಪಕ್ಷ ಮುಂತಾದ ಮುಸಲ್ಮಾನ ಪ್ರೇಮಿ ರಾಜಕೀಯ ಪಕ್ಷಗಳು ಏಕೆ ಬಾಯಿ ತೆರೆಯುತ್ತಿಲ್ಲ?