ಅಯೋಧ್ಯಾ (ಉತ್ತರಪ್ರದೇಶ) – ಇಲ್ಲಿನ ಶ್ರೀರಾಮಮಂದಿರದ ದರ್ಶನ ಪಡೆದು ಹಿಂದಿರುಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ಭದ್ರತಾ ಸಿಬ್ಬಂದಿ ಮೇ ೨ ರಂದು ವಶಕ್ಕೆ ಪಡೆದಿದ್ದಾರೆ. ಈ ಮಹಿಳೆಯ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದ್ದರಿಂದ ಆಕೆಯನ್ನು ವಶಕ್ಕೆ ಪಡೆದು ಆಕೆಯ ತೀವ್ರ ವಿಚಾರಣೆ ನಡೆಸಲಾಯಿತು. ಆಕೆಯು ಮಹಾರಾಷ್ಟ್ರದ ವರ್ಧಾ ಮೂಲದವಳಾಗಿದ್ದು, ದೇವಸ್ಥಾನಕ್ಕೆ ದರ್ಶನಕ್ಕಾಗಿ ಬಂದಿದ್ದಳು. ಪೊಲೀಸರು ಆಕೆಯ ಕುಟುಂಬದವರನ್ನು ಸಂಪರ್ಕಿಸಿದಾಗ, ಅವರು ‘ಈ ಮಹಿಳೆಯು ಮಾನಸಿಕ ಅಸ್ವಸ್ಥಳಾಗಿದ್ದು ಆಗಾಗ ಎಲ್ಲೆಂದರಲ್ಲಿ ಅಲೆದಾಡುತ್ತಿರುತ್ತಾಳೆ’ ಎಂದು ಹೇಳಿದರು. (ಇದನ್ನು ಹೇಗೆ ನಂಬುವುದು? – ಸಂಪಾದಕರು)
ಇದಕ್ಕೂ ಮುನ್ನ ಏಪ್ರಿಲ್ ೧೪ ರಂದು ಶ್ರೀರಾಮಮಂದಿರದ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿತ್ತು. ನಂತರ ಇಲ್ಲಿನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಅಯೋಧ್ಯೆಯ ನಿವಾಸಿ ಅಬ್ದುಲ್ ರೆಹಮಾನ್ನನ್ನು ಮಾರ್ಚ್ ೩ ರಂದು ಹರಿಯಾಣದ ಫರೀದಾಬಾದ್ನಿಂದ ಬಂಧಿಸಲಾಗಿತ್ತು. ಆತನ ಬಳಿ ೨ ಕೈಬಾಂಬ್ಗಳು ಸಹ ಪತ್ತೆಯಾಗಿದ್ದವು.