ಭಾರತದ ವಿದೇಶಾಂಗ ಸಚಿವಾಲಯದಿಂದ ಬಿಬಿಸಿಗೆ ಛೀಮಾರಿ!
ನವದೆಹಲಿ – ಕೇಂದ್ರ ಸರಕಾರವು ಬ್ರಿಟಿಷ್ ಸುದ್ದಿ ಸಂಸ್ಥೆ ‘ಬಿಬಿಸಿ’ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರವೂ ಬಿಬಿಸಿ ನಿರಂತರವಾಗಿ ಇಸ್ಲಾಮಿ ಭಯೋತ್ಪಾದಕರನ್ನು ‘ಮುಜಾಹಿದ್’ (ಜಿಹಾದ್ಗಾಗಿ ಹೋರಾಡುವವರು) ಎಂದು ಕರೆಯುತ್ತಿದೆ. ಭಾರತದ ಛೀಮಾರಿಯ ನಂತರ ಬಿಬಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿದೇಶಾಂಗ ಸಚಿವಾಲಯವು ಪಹಲ್ಗಾಮ್ ದಾಳಿಯ ವರದಿಗೆ ಸಂಬಂಧಿಸಿದಂತೆ ಬಿಬಿಸಿಯ ಭಾರತದ ಮುಖ್ಯಸ್ಥ ಜಾಕಿ ಮಾರ್ಟಿನ್ ಅವರಿಗೆ ಪತ್ರ ಬರೆದಿದೆ. ಇದರಲ್ಲಿ, ಭವಿಷ್ಯದಲ್ಲಿ ಈ ವಿಷಯದ ಕುರಿತು ಬಿಬಿಸಿಯ ವರದಿಗಾರಿಕೆಯನ್ನು ನಾವು ಗಮನಿಸುತ್ತೇವೆ ಎಂದು ಹೇಳಲಾಗಿದೆ.
ಬಿಬಿಸಿಯು ತನ್ನ ಹಿಂದಿ ವೆಬ್ಸೈಟ್ನಲ್ಲಿಯೂ ಸಹ ‘ಭಯೋತ್ಪಾದಕ’ ಎಂದು ಬರೆಯುವ ಬದಲು ‘ಮುಜಾಹಿದ್’ ಎಂದು ಬರೆಯುತ್ತದೆ. ಹಾಗೆಯೇ, ಬಿಬಿಸಿಯ ವರದಿಗಾರಿಕೆಯಲ್ಲಿ ಕಾಶ್ಮೀರವನ್ನು ನಿರಂತರವಾಗಿ ‘ಭಾರತೀಯ ಆಡಳಿತದ ಕಾಶ್ಮೀರ’ ಎಂದು ಉಲ್ಲೇಖಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ.
ಇತರ ವಿದೇಶಿ ಮಾಧ್ಯಮಗಳಿಂದ ಹಿಂದೂದ್ವೇಷಿ ಮತ್ತು ಭಯೋತ್ಪಾದಕ ಪ್ರೇಮಿ ವರದಿ
ಬಿಬಿಸಿಯ ಹೊರತಾಗಿ, ಅನೇಕ ಇತರ ವಿದೇಶಿ ಮಾಧ್ಯಮಗಳು ಸಹ ನಿರಂತರವಾಗಿ ಇದೇ ರೀತಿಯ ಪ್ರಚಾರ ಮಾಡುತ್ತಿವೆ. ಕತಾರ್ನ ಸರಕಾರಿ ಮಾಧ್ಯಮ ‘ಅಲ್ ಜಝೀರಾ’, ಪಾಕಿಸ್ತಾನದ ‘ದಿ ಡಾನ್’, ಅಮೇರಿಕದ ‘ನ್ಯೂಯಾರ್ಕ್ ಟೈಮ್ಸ್’ ಜಿಹಾದಿ ಭಯೋತ್ಪಾದಕರನ್ನು ‘ಭಯೋತ್ಪಾದಕ’ ಎಂದು ಕರೆಯುವ ಬದಲು ‘ಬಂದೂಕುಧಾರಿ’ ಎಂದು ವಿವರಿಸಿವೆ. ಅವರು ಪಹಲ್ಗಾಮ್ ದಾಳಿಯ ಅನೇಕ ಮಾಹಿತಿಯನ್ನು ಮರೆಮಾಚಿದ್ದರು. ಇದರಲ್ಲಿ ಭಯೋತ್ಪಾದಕರು ಧರ್ಮದ ಬಗ್ಗೆ ವಿಚಾರಿಸಿದ ನಂತರ ಹಿಂದೂಗಳನ್ನು ಕೊಂದಿರುವುದರ ಬಗ್ಗೆಯೂ ಅವರು ಉಲ್ಲೇಖಿಸಲಿಲ್ಲ.
ಸಂಪಾದಕೀಯ ನಿಲುವುಭಾರತ ಮಾತಿನಲ್ಲಿ ದಾಳಿ ಮಾಡುವುದರಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಹಿಂದೂದ್ವೇಷಿ ಮತ್ತು ಭಾರತದ್ವೇಷಿ ಬಿಬಿಸಿಯನ್ನು ಭಾರತದಲ್ಲಿ ನಿಷೇಧಿಸಬೇಕು! |