ಬಿಸಿಲಿನಿಂದ ಕಣ್ಣು ಮತ್ತು ತಲೆಯನ್ನು ರಕ್ಷಿಸಲು ವಹಿಸಬೇಕಾದ ಕಾಳಜಿ !

ಸದ್ಯ ಕೆಲವೆಡೆ ‘ಉಷ್ಣತೆಯ ಅಲೆಗಳು’ ಬರುವ ಬಗ್ಗೆ ಸೂಚನೆ ಇದೆ. ಮಧ್ಯಾಹ್ನದ ತಾಪಮಾನವು ೩೭ ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುತ್ತಿದೆ. ಆದುದರಿಂದ ತಲೆ ಮತ್ತು ಕಣ್ಣುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಬೇಸಿಗೆಯ ತಾಪಮಾನವು ಹೆಚ್ಚಾಗುತ್ತಿದ್ದರೂ, ಶಾಲೆಗಳಿಗೆ ರಜೆ ನೀಡಲು ಇನ್ನೂ ಸಮಯವಿದೆ. ಶೀತ, ಕೆಮ್ಮಿನಿಂದ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ, ಅಷ್ಟರವರೆಗೆ ಹೆಚ್ಚುತ್ತಿರುವ ತಾಪಮಾನದಿಂದಾಗಿ ಕಣ್ಣುಗಳ ಉರಿಯುವಿಕೆ, ಕೆಂಪಾಗುವಿಕೆ, ತಲೆನೋವಿನಂತಹ ಲಕ್ಷಣಗಳ ಕಾಯಿಲೆಗಳು ಆರಂಭವಾಗಿವೆ. ವಿಶೇಷ ವಾಗಿ ಮಧ್ಯಾಹ್ನ ೧೨ ರಿಂದ ೨ ರ ವರೆಗೆ ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವ ಪಾಲಕರು ತಮ್ಮ ಮತ್ತು ಮಕ್ಕಳ ತಲೆ ಮತ್ತು ಕಣ್ಣುಗಳ ಬಗ್ಗೆ ಅವಶ್ಯ ಕಾಳಜಿ ವಹಿಸಬೇಕು.

(ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ

ಆಯುರ್ವೇದದಲ್ಲಿ ಕಣ್ಣು ಮತ್ತು ತಲೆಯನ್ನು ಬಿಸಿಲಿನಿಂದ ರಕ್ಷಿಸಲು ಹೇಳಲಾಗಿದೆ. ‘ಸ್ನಾನ ಮಾಡುವಾಗ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು ಇಲ್ಲದಿದ್ದರೆ ಕೂದಲು ಮತ್ತು ಕಣ್ಣುಗಳಿಗೆ ತೊಂದರೆಯಾಗುತ್ತದೆ’, ಎಂಬ ಸಲಹೆ ನೀಡಲಾಗಿದೆ. ಕಣ್ಣಿನ ಜಾಗದಲ್ಲಿ ಸ್ವೇದನ, ಅಂದರೆ ಹಬೆ/ಶಾಖವನ್ನು ನೀಡು ವಾಗಲೂ ತಾರತಮ್ಯದಿಂದ ವಾತಾವರಣದ ಅಂದಾಜು ತೆಗೆದು ಕೊಂಡು ಅತಿ ಕಡಿಮೆ ಅಥವಾ ಸಾಧ್ಯವಾದರೆ ಕೊಡಲೇಬಾರದು, ಎಂದು ಹೇಳಲಾಗಿದೆ.

ತಿಳಿ ಬಣ್ಣದ, ಹತ್ತಿ ಬಟ್ಟೆಯ ಸ್ಕಾರ್ಫ್ ಮತ್ತು ಉತ್ತಮ ಕಂಪನಿಯ ಕನ್ನಡಕವನ್ನು (ಗಾಗಲ್ನ್ನು) ನೀವು ಮತ್ತು ನಿಮ್ಮ ಮಕ್ಕಳು ಬಳಸಿದರೆ ಲಾಭವಾಗುತ್ತದೆ. ಕಣ್ಣುಗಳಿಗೆ ಬಿಸಿಲಿನಿಂದ ಉಂಟಾಗುವ ಉರಿ, ಕೆಂಪಾಗುವಿಕೆಗೆ ಆಯರ್ವೇದದಲ್ಲಿ ಹೇಳಲಾದ ಔಷಧಿಯ ಸಸ್ಯಗಳು, ಔಷಧೀಯ ತುಪ್ಪ, ಹಾಗೆಯೇ ಬಿದಾಲಕ (ಲೇಪ), ಅನ್ನಲೇಪ, ಪಾದಾಭ್ಯಂಗ, ತರ್ಪಣ ಈ ಚಿಕಿತ್ಸೆಗಳಿಂದ ಲಾಭವಾಗುತ್ತದೆ. ಇದಕ್ಕಾಗಿ ವೈದ್ಯರ ಸಲಹೆಯನ್ನು ಅವಶ್ಯ ಪಡೆಯಬೇಕು.

ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೧೯.೩.೨೦೨೫)