Jharkhand Minister Statement : ‘ಮುಸಲ್ಮಾನರ ಮೊದಲ ಆದ್ಯತೆ ಶರಿಯತ, ನಂತರ ಸಂವಿಧಾನ!’ – ಜಾರ್ಖಂಡನ ಕಾಂಗ್ರೆಸ ಶಾಸಕ ಮತ್ತು ರಾಜ್ಯ ಸಚಿವ ಹಫೀಜುಲ ಹಸನ್ ಅನ್ಸಾರಿ

ರಾಂಚಿ (ಜಾರ್ಖಂಡ) – ಮೊದಲು ನಾವು ಶರಿಯತ ಅನ್ನು ಪಾಲಿಸೋಣ, ನಂತರ ಸಂವಿಧಾನವನ್ನು. ಇಸ್ಲಾಂನಲ್ಲಿ ಶರಿಯತ್ ಮುಖ್ಯವಾದುದು. ನಾವು ಕುರಾನ್ ಅನ್ನು ನಮ್ಮ ಹೃದಯದಲ್ಲಿ ಮತ್ತು ಸಂವಿಧಾನವನ್ನು ಕೈಯಲ್ಲಿ ಇಟ್ಟುಕೊಳ್ಳುತ್ತೇವೆ, ಎಂದು ಕಾಂಗ್ರೆಸ ಶಾಸಕ ಮತ್ತು ಜಾರ್ಖಂಡನ ಕ್ರೀಡೆ, ಯುವ ವ್ಯವಹಾರ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಹಫೀಜುಲ ಹಸನ್ ಅನ್ಸಾರಿ ಹೇಳಿದ್ದಾರೆ. ಅವರು ಏಪ್ರಿಲ್ 14 ರಂದು ಡಾ. ಭೀಮರಾವ ಅಂಬೇಡಕರ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಜಾರ್ಖಂಡ್ ರಾಜ್ಯ ಅನ್ಸಾರಿ ಅವರ ಹೇಳಿಕೆಗೆ ಭಾಜಪ ಪ್ರತಿಕ್ರಿಯಿಸಿ, ಯಾರ ಹೃದಯದಲ್ಲಿ ಶರಿಯತ ಇದೆಯೋ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಬಾಗಿಲು ತೆರೆದಿದೆ. ಭಾರತ ಕೇವಲ ಡಾ. ಭೀಮರಾವ ಅಂಬೇಡಕರ ಅವರ ಸಂವಿಧಾನದ ಮೇಲೆ ನಡೆಯುತ್ತದೆ ಮತ್ತು ಅದೇ ಸರ್ವೋಚ್ಚವಾಗಿರುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಡಾ. ಅಂಬೇಡಕರ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರೇ ರಚಿಸಿದ ಸಂವಿಧಾನದ ಇಂತಹ ಅವಮಾನವನ್ನು ಅಂಬೇಡಕರ ಪ್ರೇಮಿಗಳು ಒಪ್ಪುತ್ತಾರೆಯೇ?
  • ಕಾಂಗ್ರೆಸ ನಾಯಕ ರಾಹುಲ ಗಾಂಧಿ ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದು ರಕ್ಷಿಸುತ್ತಿರುವುದಾಗಿ ಸದಾ ಹೇಳುತ್ತಿರುತ್ತಾರೆ; ಆದರೆ ಅವರ ಮುಸ್ಲಿಂ ಶಾಸಕರು ಇದಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ, ಇದರ ಬಗ್ಗೆ ರಾಹುಲ ಗಾಂಧಿ ಮಾತನಾಡುತ್ತಾರೆಯೇ?
  • ಮುಸಲ್ಮಾನರಿಗೆ ಅವರ ಧರ್ಮವೇ ಮೊದಲು ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಇದರ ಬಗ್ಗೆ ಜಾತ್ಯತೀತವಾದಿಗಳು ಮಾತನಾಡುವುದಿಲ್ಲ; ಏಕೆಂದರೆ ಜಾತ್ಯತೀತವಾದವು ಕೇವಲ ಹಿಂದೂಗಳಿಗಾಗಿ ಇದೆ !