ತಮಿಳು ಭಾಷೆ ಮತ್ತು ಪರಂಪರೆ ಜಗತ್ತಿನಾದ್ಯಂತ ತಲುಪಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಸಹ ಅವರು ಹೇಳಿದರು!
ರಾಮೇಶ್ವರಂ (ತಮಿಳುನಾಡು) – ತಮಿಳು ಭಾಷೆ ಮತ್ತು ಪರಂಪರೆ ಜಗತ್ತಿನಾದ್ಯಂತ ತಲುಪಲು ಕೇಂದ್ರ ಸರಕಾರವು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದರು. ರಾಮೇಶ್ವರಂನಲ್ಲಿ ಏಷ್ಯಾದ ಮೊದಲ ‘ವರ್ಟಿಕಲ್ ಲಿಫ್ಟ್’ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು. ಅವರು ಮಾತು ಮುಂದುವರೆಸಿ, ‘‘ನನಗೆ ಕೆಲವೊಮ್ಮೆ ಬಹಳ ಆಶ್ಚರ್ಯವಾಗುತ್ತದೆ. ನನಗೆ ತಮಿಳುನಾಡಿನ ಕೆಲವು ನಾಯಕರಿಂದ ಪತ್ರಗಳು ಬರುತ್ತವೆ; ಆದರೆ ಅವುಗಳಲ್ಲಿ ಒಂದರಲ್ಲೂ ತಮಿಳು ಭಾಷೆಯಲ್ಲಿ ಸಹಿ ಇರುವುದಿಲ್ಲ. ತಮಿಳು ಭಾಷೆಯ ಬಗ್ಗೆ ಅಭಿಮಾನ ಇರುವವರು ಕನಿಷ್ಠ ತಮ್ಮ ಸಹಿಯನ್ನಾದರೂ ತಮಿಳು ಭಾಷೆಯಲ್ಲಿ ಮಾಡಬೇಕು. ಕಳೆದ ೧೦ ವರ್ಷಗಳಲ್ಲಿ ತಮಿಳುನಾಡಿಗೆ ನೀಡಲಾಗುತ್ತಿರುವ ಅನುದಾನದಲ್ಲಿ ಮೂರು ಪಟ್ಟು ಹೆಚ್ಚಳ ಮಾಡಿದ್ದರೂ ಅವರ ಅಳಲು ಇನ್ನೂ ನಿಂತಿಲ್ಲ.’’ ಎಂದರು.
Tamil Nadu will always play an important role in building a Viksit Bharat! pic.twitter.com/TKEExJwouj
— Narendra Modi (@narendramodi) April 6, 2025
ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ತಮಿಳುನಾಡು ಮತ್ತು ಕೇಂದ್ರ ಸರಕಾರದ ನಡುವೆ ನೇರ ಮುಖಾಮುಖಿ ಏರ್ಪಟ್ಟಿದೆ. ಈ ಹೊಸ ಶಿಕ್ಷಣ ನೀತಿಯ ಮೂರು ಭಾಷಾ ಸೂತ್ರವನ್ನು ತಮಿಳುನಾಡು ತೀವ್ರವಾಗಿ ವಿರೋಧಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ಶಾಲಾ ಶಿಕ್ಷಣದಲ್ಲಿ ಮೂರು ಭಾಷೆಗಳನ್ನು ಕಲಿಯುವ ಬಗ್ಗೆ ಉಲ್ಲೇಖಿಸಲಾಗಿದೆ. ಅದರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯವಾಗಿರಬೇಕು ಎಂದು ಸಹ ನಮೂದಿಸಲಾಗಿದೆ. ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ.
ಸಂಪಾದಕೀಯ ನಿಲುವು
|