Abdul Abeez Killed Girlfriend : ಪ್ರೇಯಸಿಗೆ ವಿಷಪೂರಿತ ಚುಚ್ಚುಮದ್ದು ನೀಡಿ ಹತ್ಯೆ: ಪ್ರಿಯಕರ ಅಬ್ದುಲ್ ಅಬೀಜ್‌ನಿಂದ ಕೃತ್ಯ

ಅಬ್ದುಲ್ ಅಬೀಜ್

ಚೆನ್ನೈ – ತಮಿಳುನಾಡಿನ ಪೆರಂಬದೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅಬ್ದುಲ್ ಅಬೀಜ್ (22) ಇಬ್ಬರು ಸ್ನೇಹಿತೆಯರ ಸಹಾಯದಿಂದ ತನ್ನ ಪ್ರೇಯಸಿಗೆ ವಿಷಪೂರಿತ ಚುಚ್ಚುಮದ್ದು ನೀಡಿ ಹತ್ಯೆ ಮಾಡಿ ಆಕೆಯ ಮೃತದೇಹವನ್ನು ಯೆರ್ಕಾಡ್ ರಸ್ತೆಯ 30 ಅಡಿ ಆಳದ ಕಂದಕಕ್ಕೆ ಎಸೆದಿದ್ದಾನೆ. ಮೃತ ಯುವತಿಯನ್ನು ತಿರುಚಿ ಜಿಲ್ಲೆಯ ತುರೈಯೂರ್‌ನ ಎಂ. ಲೋಗನಾಯಕಿ ಅಲಿಯಾಸ್ ಅಲ್ಬಿಯಾ ಎಂದು ಸೇಲಂ ಗ್ರಾಮಾಂತರ ಪೊಲೀಸರು ಗುರುತಿಸಿದ್ದಾರೆ.

1. ಲೋಗನಾಯಕಿ ಮತ್ತು ಅಬ್ದುಲ್ ಅಬೀಜ್ ಕೆಲವು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ ಪರಿಚಯವಾದರು ಮತ್ತು ಪ್ರೇಮ ಸಂಬಂಧ ಪ್ರಾರಂಭವಾಯಿತು. ಮದುವೆಯಾಗುವುದಾಗಿ ಆಮಿಷವೊಡ್ಡಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ.

2. ಅಬ್ದುಲ್ ಬೇರೆಯದ್ದೇ ಯೋಜನೆ ರೂಪಿಸಿದ್ದ. ಆತ ಲೋಗನಾಯಕಿಯನ್ನು ಮದುವೆಯಾಗಲು ಬಯಸಲಿಲ್ಲ. ಆದ್ದರಿಂದ ಆತ ತನ್ನ ಸ್ನೇಹಿತೆಯರಾದ ಅವಡಿಯ ಎಸ್. ತವಿಯಾ ಸುಲ್ತಾನಾ (22) ಮತ್ತು ವಿಲ್ಲುಪುರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿನಿ ಆರ್. ಮೋನಿಷಾ (21) ಸಹಾಯದಿಂದ ಲೋಗನಾಯಕಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.

3. ಲೋಗನಾಯಕಿ ಸೇಲಂನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಮಹಿಳಾ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು. ಮಾರ್ಚ್ 1 ರಂದು ರಾತ್ರಿ ಲೋಗನಾಯಕಿ ಹಾಸ್ಟೆಲ್‌ನಿಂದ ಹೊರಗೆ ಹೋದವಳು ವಾಪಸ್ಸು ಬರಲಿಲ್ಲ, ಹಾಗೆಯೇ ಕೆಲಸಕ್ಕೂ ಹೋಗಲಿಲ್ಲ. ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಹಾಸ್ಟೆಲ್ ವಾರ್ಡನ್ ಸೇಲಂ ನಗರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

4. ಲೋಗನಾಯಕಿಯ ಮೊಬೈಲ್ ಫೋನ್‌ನಲ್ಲಿನ ಕೊನೆಯ ಸಂಪರ್ಕದ ಆಧಾರದ ಮೇಲೆ ಸೇಲಂ ಪಲ್ಲಪಟ್ಟಿ ಪೊಲೀಸರು ಅಬ್ದುಲ್‌ನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ ಅಬ್ದುಲ್, ತವಿಯಾ ಮತ್ತು ಮೋನಿಷಾ ಮಾರ್ಚ್ 1 ರಂದು ರಾತ್ರಿ ಲೋಗನಾಯಕಿಯನ್ನು ಯೆರ್ಕಾಡ್ ಬೆಟ್ಟಕ್ಕೆ ಕರೆದೊಯ್ದು ವಿಷಪೂರಿತ ಚುಚ್ಚುಮದ್ದು ನೀಡಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

5. ಅಬ್ದುಲ್ ಲೋಗನಾಯಕಿ ಜೊತೆಗೆ ಮಾತ್ರವಲ್ಲದೆ ತವಿಯಾ ಮತ್ತು ಮೋನಿಷಾ ಜೊತೆಗೂ ದೈಹಿಕ ಸಂಬಂಧ ಹೊಂದಿದ್ದ. ಮದುವೆಯಾಗುವಂತೆ ಲೋಗನಾಯಕಿ ಅಬೀಜ್‌ನನ್ನು ಒತ್ತಾಯಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಮೂವರು ಸೇರಿ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

6. ಅಬೀಜ್ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಲೋಗನಾಯಕಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಯೆರ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

  • ಕಾಮುಕ ಮುಸಲ್ಮಾನನ ಕ್ರೌರ್ಯವನ್ನು ತಿಳಿಯಿರಿ!
  • ಇಂತಹವರಿಗೆ ಶರಿಯಾ ಕಾನೂನಿನ ಪ್ರಕಾರ ಗುಂಡಿಯಲ್ಲಿ ಹೂಳಿ ಕಲ್ಲು ಹೊಡೆದು ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಾಗಿಲ್ಲ!