ಮುಂಬಯಿಯಲ್ಲಿ 10 ಬಾಂಗ್ಲಾದೇಶಿ ನುಸುಳುಕೋರರ ಬಂಧನ !

ಮುಂಬಯಿ – ಮುಂಬಯಿ ಪೊಲೀಸರು ಕಾಳಾಚೌಕಿಯಿಂದ 5, ಗೋವಂಡಿಯಿಂದ 4 ಮತ್ತು ಸಾಕಿನಾಕಾದಿಂದ 1, ಹೀಗೆ 10 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದ್ದಾರೆ. ಅವರ ಬಳಿ ನಕಲಿ ದಾಖಲೆಗಳ ಆಧಾರದ ಮೇಲೆ ಸಿದ್ಧಪಡಿಸಿದ ಭಾರತೀಯ ಪೌರತ್ವದ ದಾಖಲೆಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಳಾಚೌಕಿಯಿಂದ ಮಹಮ್ಮದ ಸಲಾಂ ಸರ್ದಾರ ಉರ್ಫ್ ಅಬು ಸಲಾಂ, ಸೊಹಾಗ ಸಫೀಕುಲ ಸರ್ದಾರ ಮಹಮ್ಮದ ಸೊಹಾಗ ಸಫೀಕುಲ ಇಸ್ಲಾಂ, ಮಹಮ್ಮದ ಶಮೀಮ ಮುರಾದ ಹಸನ ಅಲಿ ಉರ್ಫ್ ಸಮೀಮ ಮುಲ್ಲಾ, ಮಹಮ್ಮದ ಅಲಾಮಿನ ಲತೀಫ ಮೊರೊಲ ಮತ್ತು ಆಶುರಾ ಖಾತೂನ ಅವರನ್ನು ಬಂಧಿಸಲಾಗಿದೆ. ಗೋವಂಡಿ ಮತ್ತು ಸಾಕಿನಾಕಾದಿಂದ ಹುಸೇನ ಮೊಫೀಜಲ ಶೇಖ, ಲಿಟೊನ ಮೊಫೀಜಲ ಶೇಖ, ಅನ್ಸಾರ ಅಲಿ ಸರ್ದಾರ, ಸುಲೇಮಾನ ರಹೀಮ ಶೇಖ ಮತ್ತು ಶಾಹಿದಾ ಮುಲ್ಲಾ ಉರ್ಫ ಮಾಹಿ ಚೌಧರಿ ಅವರನ್ನು ಬಂಧಿಸಲಾಗಿದೆ. ಅವರೆಲ್ಲರೂ ಭಾರತ-ಬಾಂಗ್ಲಾದೇಶ ಗಡಿಯಿಂದ ಅನಧಿಕೃತವಾಗಿ ಭಾರತವನ್ನು ಪ್ರವೇಶಿಸಿ ಮುಂಬಯಿಗೆ ಬಂದಿದ್ದಾರೆ.

ಸಂಪಾದಕೀಯ ನಿಲುವು

ಬಂಧನದ ನಂತರ ಇಂತಹ ನುಸುಳುಕೋರರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಎನ್ನುವುದೂ ನಾಗರಿಕರಿಗೆ ತಿಳಿಯಬೇಕು. ಇಲ್ಲಿಯವರೆಗೆ ಬಂಧಿಸಿರುವ ಎಲ್ಲಾ ನುಸುಳುಕೋರರನ್ನು ಅವರ ದೇಶಕ್ಕೆ ಅಟ್ಟಬೇಕು !