ದೇಶದ ನಾಗರಿಕರ ಮುಂದೆ ಸತ್ಯ ಮಂಡಿಸುವುದಕ್ಕಾಗಿ ಇತಿಹಾಸ ಪುಸ್ತಕದ ಪುನರ್ ಲೇಖನ ಅಗತ್ಯ ! – ಹಿಂದೂ ವಿಧೀಜ್ಞ ಪರಿಷತ್ತು

  • ಹಿಂದೂ ವಿಧೀಜ್ಞ ಪರಿಷತ್ತಿನಿಂದ ಎನ್.ಸಿ.ಇ.ಆರ್.ಟಿ.ಗೆ ಪತ್ರ

  • ಹಿಂದೂ ವಿಧೀಜ್ಞ ಪರಿಷತ್ತಿನಿಂದ ಎನ್.ಸಿ.ಇ.ಆರ್.ಟಿ.ಗೆ ಪತ್ರ ಮುಖೇನ ಆಗ್ರಹ !

ಠಾಣೆ – ಅತ್ಯಾಚಾರಿ ಇಸ್ಲಾಮಿ ಆಕ್ರಮಣಕಾರರನ್ನು ‘ಒಳ್ಳೆಯ ಮತ್ತು ಕಾರ್ಯಕ್ಷಮ’ ರಾಜರೆಂದು ಚಿತ್ರಿಸಿರುವ ಮತ್ತು ದೇಶದಲ್ಲಿನ ಮೂಲ ಜನರಿಗೆ (ಹಿಂದುಗಳಲ್ಲಿ) ‘ಎರಡನೆಯ ನಾಗರೀಕ’ ಎಂದು ಭಾವನೆ ನಿರ್ಮಾಣ ಮಾಡುವ ಇತಿಹಾಸದ ಏಕ ಪಕ್ಷಿಯ ಚಿತ್ರಣ ತಕ್ಷಣ ಬದಲಾಯಿಸಬೇಕು. ಜೊತೆಗೆ ದೇಶದಲ್ಲಿನ ನಾಗರಿಕರ ಮುಂದೆ ಸತ್ಯ ಮಂಡಿಸುವುದಕ್ಕಾಗಿ ಇತಿಹಾಸದ ಪುಸ್ತಕದ ಪುನರ್ ಲೇಖನ ಮಾಡಬೇಕು, ಎಂದು ಹಿಂದೂ ವಿಧೀಜ್ಞ ಪರಿಷತ್ತು ಒಂದು ಮಹ್ತವಪೂರ್ಣ ಬೇಡಿಕೆಯನ್ನು ಸಲ್ಲಿಸಿದೆ. ಪರಿಷತ್ತಿನಿಂದ ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತಿನ’ (ಎನ್.ಸಿ.ಇ.ಆರ್.ಟಿ.)ಯ ಸಂಚಾಲಕರಿಗೆ ಇತ್ತೀಚೆಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ. ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಇವರು ಈ ಸಂದರ್ಭದಲ್ಲಿ ‘ಸನಾತನ ಪ್ರಭಾತ’ಗೆ ಮಾಹಿತಿ ನೀಡಿದರು.

೧. ಹಿಂದೂ ವಿಧೀಜ್ಞ ಪರಿಷತ್ತಿನ ಕೆಲವು ಸದಸ್ಯರು ‘ಎನ್.ಸಿ.ಇ.ಆರ್.ಟಿ.’ಯ ಜಾಲತಾಣದಲ್ಲಿ ಪ್ರಕಾಶಿತಗೊಂಡಿರುವ ಇತಿಹಾಸದ ಕೆಲವು ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಿದಾಗ ಅದರಲ್ಲಿ ಭಾರತೀಯ ನಾಗರಿಕರ ದೃಷ್ಟಿಕೋನದಿಂದ ಇತಿಹಾಸದ ಯೋಗ್ಯ ರಚನೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇದರಲ್ಲಿ ಇಸ್ಲಾಮಿ ಆಕ್ರಮಣಕಾರರು ನಡೆಸಿರುವ ಅಮಾನವೀಯ ಪೌಶಾಚಿಕ ಪ್ರವೃತ್ತಿಯ ದೌರ್ಜನ್ಯವನ್ನು ಮರೆಮಾಚುವುದಕ್ಕಾಗಿ ಒಂದು ವಿಫಲ ಪ್ರಯತ್ನ ಮಾಡಲಾಗಿದೆ. ಅವರಿಗೆ ಈ ಪ್ರಾಂತದ ಕಾರ್ಯಕ್ಷಮ ಸರಕಾರ ಮತ್ತು ಡಳಿತಗಾರರೆಂದು ಚಿತ್ರಿಸಲಾಗಿದೆ.

೨. ಮಹತ್ವದ್ದು ಎಂದರೆ ಇತಿಹಾಸದ ಪುಸ್ತಕದಲ್ಲಿ ಈ ಇಸ್ಲಾಮಿ ಒರಟು ಆಡಳಿತಗಾರರು ಹಿಂದೂಸ್ಥಾನದಲ್ಲಿನ ಸ್ಥಳೀಯರ ಮೇಲೆ ಹೇರಿರುವ ಧಾರ್ಮಿಕ ಮತಾಂಧತೆಯ ಉಲ್ಲೇಖ ಎಲ್ಲಿಯೂ ಇಲ್ಲ. ಅಧಿಕಾರಕ್ಕಾಗಿ ಇಸ್ಲಾಮಿ ಆಡಳಿತಗಾರರು ಸ್ವಂತ ತಂದೆಯ ಹತ್ಯೆ ಮಾಡುವುದು ಅಥವಾ ಅವರನ್ನು ಜೈಲಿನಲ್ಲಿ ಕೂಡಿ ಹಾಕುವುದು, ಸಂತ ಸಹೋದರನ ಬರ್ಬರ ಹತ್ಯೆ ಮಾಡುವುದು ಮತ್ತು ಬಲವಂತವಾಗಿ ತನ್ನನ್ನು ಸಾಮ್ರಾಟ ಎಂದು ನೇಮಿಸಿಕೊಳ್ಳುವುದು ಇದರ ಬಗ್ಗೆಯೂ ಕೂಡ ಯಾವುದೇ ಉಲ್ಲೇಖ ಈ ಪುಸ್ತಕಗಳಲ್ಲಿ ಇಲ್ಲ.

೩. ಈ ಪಠ್ಯಪುಸ್ತಕದಲ್ಲಿ ಇತಿಹಾಸದಲ್ಲಿನ ತಪ್ಪಾದ ವರ್ಣನೆಯ ಕೆಲವು ಉದ್ದರಣೆಗಳು ಕೆಳಗಿನಂತಿವೆ :

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಆ. ಏಳನೆಯ ತರಗತಿಯ ಇತಿಹಾಸದ ಪಠ್ಯಪುಸ್ತಕದಲ್ಲಿ ‘ಸಂರಕ್ಷಿತ ಜನರು’ ಈ ಸುಳ್ಳು ಕಥೆಯ ವರ್ಣನೆ ಮಾಡಿದ್ದಾರೆ. ಇದೇ ಪಠ್ಯಪುಸ್ತಕದಲ್ಲಿ ಚಂಗೇಜ ಖಾನ್ ಮತ್ತು ತೈಮೂರ ಇವರನ್ನು ‘ಶ್ರೇಷ್ಟರು’ ಎಂದು ಸಂಬೋಧಿಸಿದ್ದಾರೆ. ‘ಮೊಘಲರ ಈ ಇಬ್ಬರು ಮಹಾನರಾಜ ವಂಶದ ವಂಶಜರಾಗಿದ್ದಾರೆ’ – ಅವರ ತಾಯಿಯ ಕಡೆಯಿಂದ ಚಂಗೇಜ ಖಾನರ ವಂಶಜರು ಇದ್ದಾರೆ ಹಾಗೂ ತಂದೆಯ ಕಡೆಯಿಂದ ಅವರು ತೈಮೂರನ ಉತ್ತರಾಧಿಕಾರಿಗಳಾಗಿದ್ದಾರೆ. ಭಾರತೀಯರು ಚಂಗೇಜ ಖಾನ್ ಮತ್ತು ತೈಮೂರನನ್ನು ‘ಮಹಾನ’ ಎಂದು ಯಾವ ಅರ್ಥದಿಂದ ಘೋಷಿಸುವ ಆವಶ್ಯಕತೆ ಇದೆ?

೪. ಈ ಪುಸ್ತಕದಲ್ಲಿನ ಎಂಟನೇ ಅಧ್ಯಾಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಪ್ಪಾದ ಚಿತ್ರಣ ಮಾಡಲಾಗಿದೆ. ಈ ಅಧ್ಯಾಯ ಛತ್ರಪತಿ ಶಿವಾಜಿ ಮಹಾರಾಜರ ಸಂದರ್ಭ ನೀಡುತ್ತದೆ; ಆದರೆ ಬಹಳ ಅನೌಪಚಾರಿಕವಾಗಿ ಇದೆ. ಈ ಅಧ್ಯಾಯದಲ್ಲಿ ಮೊಘಲರ ದೌರ್ಜನ್ಯದ ಬಗ್ಗೆ ಅಥವಾ ಸ್ವದೇಶಿ ಜನರ ಮೇಲೆ ಹೇರಿರುವ ಇಸ್ಲಾಮಿ ವಿಕೃತಿಗಳ ಬಗ್ಗೆ ಏನನ್ನು ಉಲ್ಲೇಖಿಸಿಲ್ಲ.

೫. ಈ ರೀತಿ ಪುಸ್ತಕದಲ್ಲಿನ ಇತಿಹಾಸದ ಸತ್ಯ ಚಿತ್ರಣ ಮಾಡುವ ಬದಲು ಮೊಘಲರು ಮತ್ತು ಹಿಂದಿನ ಇಸ್ಲಾಮಿ ಆಡಳಿತಗಾರರ (ಎಲ್ಲಾ ಒರಟು) ಜಾತ್ಯತೀತ ಮತ್ತು ಪರಾಕ್ರಮಿಗಳಾಗಿದ್ದರು, ಎಂದು ಸುಳ್ಳು ವರ್ಣನೆ ಮಾಡಲಾಗಿದೆ.

೬. ಇತಿಹಾಸದ ಬಗ್ಗೆ ಇರುವ ಈ ಸುಳ್ಳು ಮಾಹಿತಿ ಬದಲಾಯಿಸುವುದಕ್ಕಾಗಿ ‘ಎನ್.ಸಿ.ಇ.ಆರ್.ಟಿ. ಯಿಂದ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂ ವಿಧೀಜ್ಞ ಪರಿಷತ್ತಿನಿಂದ ಆಗ್ರಹಿಸಲಾಗಿದೆ.

ಸಂಪಾದಕೀಯ ನಿಲುವು

ಕಳೆದ ಹತ್ತುವರೆ ವರ್ಷಗಳಿಂದ ಕೇಂದ್ರದಲ್ಲಿ ಹಿಂದುತ್ವನಿಷ್ಠ ಭಾಜಪದ ಅಧಿಕಾರ ಇರುವಾಗ ‘ರಾಷ್ಟ್ರೀಯ ಶಿಕ್ಷಣ ನೀತಿ’ ರೂಪಿಸುವ ಮಹತ್ವದ ನಿರ್ಣಯ ತೆಗೆದುಕೊಂಡಿದೆ; ಆದರೆ ಇನ್ನು ಮುಂದೆ ಸಾಗಿ ಆಕ್ರಮಣಕಾರಿಗಳ ಹಾಡಿಹೊಗಳುವ ಇತಿಹಾಸ ಅಳಿಸಿ ಹಿಂದೂರಾಜರ ಶೌರ್ಯದ ಪಾಠಗಳು ಯುವ ಪೀಳಿಗೆಗೆ ನೀಡುವುದು ಆವಶ್ಯಕವಾಗಿದೆ. ಹಿಂದೂ ವಿಧೀಜ್ಞ ಪರಿಷತ್ತಿನಿಂದ ಸಲ್ಲಿಸಲಾದ ಬೇಡಿಕೆಗಾಗಿ ಅವರ ಅಭಿನಂದನೆ ! ಹಿಂದೂ ಸಮಾಜವು ಈ ಬೇಡಿಕೆಗೆ ವ್ಯಾಪಕ ಬೆಂಬಲ ನೀಡುವುದು ಅವಶ್ಯಕವಾಗಿದೆ !