ಸನಾತನ ಸಂಸ್ಥೆಯ ಕಾರ್ಯಕ್ಕೆ ಸಹಕರಿಸುವ ‘ಸೀಬರ್ಡ್ ಟ್ರಾನ್ಸಪೊರ್ಟ’ ಸಾರಿಗೆ ಸಂಸ್ಥೆಯ ಶ್ರೀ. ನಾಗರಾಜ ಇವರಿಗೆ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಇವರಿಂದ ಸತ್ಕಾರ

ಶ್ರೀ. ನಾಗರಾಜ ಇವರನ್ನು ಸತ್ಕಾರ ಮಾಡುತ್ತಿರುವ ಧರ್ಮಪ್ರಚಾರಕ ಸಂತ ಪೂ. ರಮಾನಂದ ಗೌಡ

ಬೆಂಗಳೂರು – ಬೆಂಗಳೂರಿನ ‘ಸೀಬರ್ಡ್ ಟ್ರಾನ್ಸ್‌ಪೋರ್ಟ್‌’ನ ಮಾಲೀಕ ಶ್ರೀ. ನಾಗರಾಜ ಇವರು ಕಳೆದ ಅನೇಕ ವರ್ಷಗಳಿಂದ ಸನಾತನ ಸಂಸ್ಥೆಯ ಕಾರ್ಯಕ್ಕೆ ಸಹಕಾರ ಮಾಡುತ್ತಿದ್ದಾರೆ. ಅದಕ್ಕಾಗಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂ. ರಮಾನಂದ ಗೌಡ ಇವರು ಶ್ರೀ. ನಾಗರಾಜ ಇವರನ್ನು ಬೆಂಗಳೂರಿನಲ್ಲಿ ಸತ್ಕಾರ ಮಾಡಿದರು. ಪೂ ರಮಾನಂದ ಗೌಡ ಇವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ‘ಸನಾತನ ಸಂಸ್ಥೆಯು ನಿಸ್ವಾರ್ಥವಾಗಿ ಅಧ್ಯಾತ್ಮ ಪ್ರಸಾರ, ಅಧ್ಯಾತ್ಮದ ವಿಷಯದಲ್ಲಿ ಸಂಶೋಧನೆ, ಸಮಾಜವನ್ನು ಅಧ್ಯಾತ್ಮದ ಕಡೆಗೆ ಹೊರಳಿಸುವ ಅಮೂಲ್ಯ ಕಾರ್ಯ ಮಾಡುತ್ತಿದೆ. ಸಂಸ್ಥೆಯ ಮಾರ್ಗದರ್ಶನ ಅಡಿಯಲ್ಲಿ ಸಾಧನೆಯ ಮಾಡುವ ಮತ್ತು ಸನಾತನ ಧರ್ಮ ಪ್ರಚಾರಕಾರ್ಯಕ್ಕೆ ಸಹಾಯ ಮಾಡುವ ಸಾವಿರಾರು ಸಾಧಕರು, ಸನಾತನದ ಹಿತಚಿಂತಕರು ಸಾಧನೆಯಲ್ಲಿ ಪ್ರಗತಿಯನ್ನು ಮಾಡಿಕೊಂಡಿದ್ದಾರೆ. ಅದಕ್ಕಾಗಿ ಶ್ರೀ. ನಾಗರಾಜರವರ ಸಹಕಾರವು ನಿಜವಾಗಿಯೂ ಆದರ್ಶವಾಗಿದೆ,’ ಎಂದರು. ಈ ಸಂದರ್ಭದಲ್ಲಿ ಬೆಂಗಳೂರಿನ ಉದ್ಯಮಿ ಶ್ರೀ. ಅರುಣ ಗೌಡರ್‌ ಇವರು ಉಪಸ್ಥಿತರಿದ್ದರು.