|
ಶ್ರೀ. ಪ್ರೀತಮ ನಾಚಣಕರ್, ಪ್ರಯಾಗರಾಜ್ ವಿಶೇಷ ಪ್ರತಿನಿಧಿ

ಪ್ರಯಾಗರಾಜ್, ಜನವರಿ 17 (ಸುದ್ದಿ.) – ಆಂಧ್ರಪ್ರದೇಶದ ತಿರುಪತಿಯಂತೆ, ತೀರ್ಥರಾಜ ಪ್ರಯಾಗದಲ್ಲಿಯೂ ಶ್ರೀ ಬಾಲಾಜಿಯ ಭವ್ಯ ದೇವಾಲಯವನ್ನು ನಿರ್ಮಿಸಲಾಗುವುದು. ತಿರುಪತಿ ದೇವಸ್ಥಾನವು ಶೀಘ್ರದಲ್ಲೇ ಉತ್ತರ ಪ್ರದೇಶ ಸರಕಾರವನ್ನು ಸಂಪರ್ಕಿಸಿ ಈ ಬಗ್ಗೆ ಪರಿಶೀಲಿಸಿ ಈ ಪರಿಕಲ್ಪನೆಯನ್ನು ಜಾರಿಗೆ ತರಲಿದೆ ಎಂದು ತಿರುಪತಿ ದೇವಸ್ಥಾನವು ‘ಸನಾತನ ಪ್ರಭಾತ’ ದಿನಪತ್ರಿಕೆಯ ವರದಿಗಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.
ಪ್ರಸ್ತುತ, ಪ್ರಯಾಗರಾಜ್ ನಲ್ಲಿ ಮಹಾ ಕುಂಭ ಮೇಳಕ್ಕಾಗಿ ಪ್ರಯಾಗರಾಜ್ ಪ್ರಾಧಿಕಾರದಿಂದ ತಿರುಪತಿ ಬಾಲಾಜಿ ದೇವಸ್ಥಾನಕ್ಕಾಗಿ 5 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಈ ಭೂಮಿಯಲ್ಲಿ ಶ್ರೀ ಬಾಲಾಜಿಯ ತಾತ್ಕಾಲಿಕ ದೇವಾಲಯವನ್ನು ನಿರ್ಮಿಸಲಾಗಿದ್ದು, ಇದು 2.8 ಎಕರೆ ವಿಸ್ತೀರ್ಣದಲ್ಲಿದೆ. ಈ ದೇವಾಲಯದ ಪ್ರದೇಶದಲ್ಲಿ ಏಕಕಾಲದಲ್ಲಿ 2 ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಇದೆ. ಶ್ರೀ ಬಾಲಾಜಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ನಿಯಮಿತವಾಗಿ ಈ ದೇವಾಲಯಕ್ಕೆ ಬರುತ್ತಿದ್ದಾರೆ. ಕುಂಭಮೇಳದಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ಬಾಲಾಜಿ ದೇವಾಲಯದ ಪ್ರತಿಕೃತಿಯ ಬಗ್ಗೆ ಅನೇಕ ಭಕ್ತರು ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪ್ರಯಾಗರಾಜ್ನಲ್ಲಿ ಶ್ರೀ ಬಾಲಾಜಿಯ ಶಾಶ್ವತ ಭವ್ಯ ದೇವಾಲಯವನ್ನು ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಸುತ್ತಮುತ್ತಲಿನ ರಾಜ್ಯಗಳ ಭಕ್ತರು ಸಹ ಪ್ರಯಾಗರಾಜ್ನಂತಹ ತೀರ್ಥಕ್ಷೇತ್ರದಲ್ಲಿ ಶ್ರೀ ಬಾಲಾಜಿಯ ದೇವಾಲಯವನ್ನು ನಿರ್ಮಿಸಬೇಕೆಂದು ತಿರುಪತಿ ದೇವಸ್ಥಾನವು ಒತ್ತಾಯಿಸಿದೆ. ಆದ್ದರಿಂದ, ತಿರುಪತಿ ದೇವಸ್ಥಾನವು ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಉತ್ತರ ಪ್ರದೇಶ ಸರಕಾರ ದೇವಸ್ಥಾನಕ್ಕೆ ಭೂಮಿ ಒದಗಿಸಿ ಸಹಕರಿಸಬೇಕು ! – ೧೦೦೮ ಶ್ರೀ ಶ್ರೀ ವಿದ್ಯಾಧೀಶ ತೀರ್ಥಸ್ವಾಮಿಗಳು, ಮಠಾಧಿಪತಿ, ಪಲಿಮಾರು ಪೀಠ, ಉಡುಪಿ, ಕರ್ನಾಟಕ
ರಾಜ್ಯದ ಉಡುಪಿಯಲ್ಲಿರುವ ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನವಾದ ಶ್ರೀ ಋಷಿಕೇಶ ಅಷ್ಟತೀರ್ಥಪೀಠದ ಶ್ರೀ ಪಲಿಮಾರು ಮಠದ ಮಠಾಧೀಶರಾದ 1008 ಶ್ರೀ ಶ್ರೀ ವಿದ್ಯಾಧೀಶ ತೀರ್ಥಸ್ವಾಮಿಗಳು ಜನವರಿ 16 ರಂದು ಮಹಾಕುಂಭ ಮೇಳದ ಸಂದರ್ಭದಲ್ಲಿ ಶ್ರೀ ಬಾಲಾಜಿ ದೇವಸ್ಥಾನದಲ್ಲಿ ದರ್ಶನ ಪಡೆದರು. ಈ ಸಮಯದಲ್ಲಿ, ತಿರುಪತಿಯ ಶ್ರೀ ಬಾಲಾಜಿ ದೇವಾಲಯವು ವೈಕುಂಠದ ದರ್ಶನವನ್ನು ನೀಡುತ್ತದೆ, ಅದೇ ರೀತಿ, ಪ್ರಯಾಗರಾಜ್ನಲ್ಲಿ ಶ್ರೀ ಬಾಲಾಜಿ ದೇವಾಲಯವನ್ನು ನಿರ್ಮಿಸಿದರೆ, ಇಲ್ಲಿಗೆ ಬರುವ ಭಕ್ತರಿಗೆ ತಿರುಪತಿಯ ದರ್ಶನವಾಗುತ್ತದೆ. ಆದ್ದರಿಂದ, ಪ್ರಯಾಗರಾಜ್ನಲ್ಲಿ ಸಾಧ್ಯವಾದಷ್ಟು ಬೇಗ ಶ್ರೀ ಬಾಲಾಜಿ ದೇವಾಲಯವನ್ನು ನಿರ್ಮಿಸಬೇಕು. ಇದಕ್ಕಾಗಿ ಉತ್ತರ ಪ್ರದೇಶ ಸರಕಾರ ಭೂಮಿ ಒದಗಿಸಿ ಅಗತ್ಯ ನೆರವು ನೀಡಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !