ಪಾಕಿಸ್ತಾನಿಯರನ್ನು ಭಾರತಕ್ಕೆ ಕರೆತಂದ ಪ್ರಮುಖ ಆರೋಪಿ ಪರ್ವೇಜ್ ನ ಬಂಧನ !

ಬೆಂಗಳೂರು – ದೇಶದಲ್ಲಿ ನಕಲಿ ದಾಖಲೆಗಳೊಂದಿಗೆ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು. ಈ ಪ್ರಕರಣದ ಪ್ರಮುಖ ಸೂತ್ರಧಾರ (ಮಾಸ್ಟರ್ ಮೈಂಡ್)ಪರ್ವೇಜ್ ನನ್ನು ಬೆಂಗಳೂರು ಜಿಲ್ಲೆಯ ಜಿಗಣಿಯಲ್ಲಿ ಬಂಧಿಸಲಾಗಿದೆ. ಬಂಧಿತ ಪಾಕಿಸ್ತಾನಿ ಮುಸಲ್ಮಾನರು ಪರ್ವೇಜ್‌ನೊಂದಿಗೆ ಸಂಪರ್ಕದಲ್ಲಿ ಇದ್ದರು ಮತ್ತು ಅವನ ಸೂಚನೆಯಂತೆ ಭಾರತದಲ್ಲಿ ಕೆಲಸ ಮಾಡುತ್ತಿದ್ದರು. ಪರ್ವೇಜ್ ನು ಪಾಕಿಸ್ತಾನಿ ನಾಗರೀಕರಿಗಾಗಿ ಭಾರತೀಯ ದಾಖಲೆಗಳನ್ನು ಸಿದ್ಧಪಡಿಸಿ ಕೊಟ್ಟಿದ್ದನು. ಹಾಗೆಯೇ ಯೂನಸ್ ಆಲ್ಗೋರ್ ಈ ಕಟ್ಟರ ಧಾರ್ಮಿಕ ನಾಯಕನ ಧರ್ಮೋಪದೇಶದ ಪ್ರಚಾರಕ ಎಂದೂ ಕೆಲಸ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

ಕೇಂದ್ರ ಸರಕಾರವು ಇಂತಹ ದೇಶದ್ರೋಹಿಗಳ ಮೇಲೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸಬೇಕು !