ಕಾನಪುರದಲ್ಲಿ ರೈಲು ಹಳಿಯ ಮೇಲೆ ಮತ್ತೆ ಸಿಲಿಂಡರ್ ಪತ್ತೆ

ಸಾಹಿಬಗಂಜ (ಜಾರ್ಖಂಡ್) – ಉತ್ತರಪ್ರದೇಶದ ಕಾನಪುರದಲ್ಲಿ ರೈಲು ಹಳಿಗಳ ಮೇಲೆ ಅಗ್ನಿಶಾಮಕ ಸಿಲಿಂಡರ ಇಟ್ಟಿರುವುದು ಕಂಡು ಬಂದಿದೆ. ಅದೇ ಸಮಯದಲ್ಲಿ ಜಾರ್ಖಂಡದಲ್ಲಿನ ಸಾಹಿಬಗಂಜ ಇಲ್ಲಿಯ ರೈಲು ಹಳಿ ಬಾಂಬ್ ಸ್ಪೋಟದ ಮೂಲಕ ಧ್ವಂಸ ಮಾಡಲಾಗಿದೆ. ಪೊಲೀಸರು ಎರಡು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಸಪ್ಟೆಂಬರ್ ೨೨ ರಂದು ಕಾನಪುರದಲ್ಲಿನ ರೈಲು ಹಳಿಯ ಮೇಲೆ ಒಂದು ಗ್ಯಾಸ್ ಸಿಲೆಂಡರ್ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನು ಕೂಡ ಬಂಧಿಸಲಾಗಿಲ್ಲ.
🚨Railway tracks blown up in Jharkhand.
⚠️Cylinders found again on the railway track in Kanpur.
👉 Are these repeated incidents a part of ‘Railway J!h@d’?
The Investigating agencies must have had a clue by now. If this isn’t stopped, a disaster is not far away for sure.
VC :… pic.twitter.com/5RlH0D0QxY
— Sanatan Prabhat (@SanatanPrabhat) October 3, 2024
೧. ಕಾನಪುರದಲ್ಲಿ ಅಕ್ಟೋಬರ್ ೨ ರಂದು ಬೆಳಿಗ್ಗೆ ೮ ರ ಸುಮಾರಿಗೆ ಒಂದು ಗೂಡ್ಸ್ ಗಾಡಿ ಅಂಬಿಯಾಪುರದಿಂದ ಹೋಗುತ್ತಿತ್ತು. ಆಗ ಲೋಕೋ ಪೈಲೆಟ್ ಗೆ (ಚಾಲಕನಿಗೆ) ಹಾವಡ-ದೆಹಲಿ ಮಾರ್ಗದಲ್ಲಿ ಅಗ್ನಿಶಾಮಕ ಯಂತ್ರ ಬಿದ್ದಿರುವುದು ಕಂಡಿತು.
೨. ಗೂಡ್ಸ್ ಗಾಡಿಯ ಚಾಲಕನು ರೈಲುಗಾಡಿ ನಿಲ್ಲಿಸಿ ನಿಯಂತ್ರಣ ಕಕ್ಷೆಗೆ ಮಾಹಿತಿ ನೀಡಿದನು. ರೈಲ್ವೆ ಪೊಲೀಸ್ ತಂಡ ತುರ್ತಾಗಿ ಘಟನಾಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿತು. ದೊರೆತಿರುವ ಅಗ್ನಿಶಾಮಕ ಯಂತ್ರ ಬಹಳ ಹಳೆಯದಾಗಿತ್ತು. ಪೊಲೀಸರು ಪ್ರಾಥಮಿಕವಾಗಿ ಇದು ಯಾರದೋ ಕಿಡಿಗೇಡಿ ಕೆಲಸ ಎಂದು ಹೇಳಿದೆ. (ಭಾರತಾದ್ಯಂತ ಇಂತಹ ಘಟನೆ ಘಟಿಸುತ್ತಿದ್ದರು ಕಿಡಿಗೇಡಿತನ ಎಂದು ತಿಳಿದು ಈ ಅಂಶವನ್ನು ಪೊಲೀಸರು ಮರೆಮಾಚಬಾರದು. ಇದು ರೈಲು ಜಿಹಾದ್ ಇರಬಹುದು ಎಂದು, ಅದೇ ದೃಷ್ಟಿಯಿಂದ ಪೊಲೀಸರು ಪ್ರಯತ್ನ ಮಾಡುವುದು ಅಪೇಕ್ಷಿತವಾಗಿದೆ ! – ಸಂಪಾದಕರು)
೩. ಜಾರ್ಖಂಡದಲ್ಲಿನ ಸಾಹಿಬಗಂಜದಲ್ಲಿನ ರಾಂಗಾ ಗ್ರಾಮದ ಹತ್ತಿರ ರೈಲ್ವೆ ಹಳಿ ಅಕ್ಟೋಬರ್ ೧ ರಾತ್ರಿ ಬಾಂಬ್ ಸ್ಫೋಟೋದ ಮೂಲಕ ಧ್ವಂಸಗೊಳಿಸಲಾಗಿದೆ. ಈ ಶಕ್ತಿಯುತ ಸ್ಪೋಟದಿಂದ ರೈಲು ಹಳಿಯ ೪೭೦ ಸೆಂಟಿಮೀಟರ್ ನ ತುಂಡು ೩೯ ಮೀಟರ್ ದೂರದಲ್ಲಿ ಬಿದ್ದಿತ್ತು. ಯಾವ ಸ್ಥಳದಲ್ಲಿ ಸ್ಪೋಟ ನಡೆದಿದೆ ಅಲ್ಲಿ ೩ ಅಡಿ ಆಳದ ತೆಗ್ಗು ಆಗಿದೆ.
ಸಂಪಾದಕೀಯ ನಿಲುವುಈ ರೀತಿಯ ಘಟನೆ ದೇಶದಲ್ಲಿ ಒಂದರ ಹಿಂದೆ ಒಂದರಂತೆ ಘಟಿಸುತ್ತಲಿರುವಾಗ ‘ಇದು ರೈಲು ಜಿಹಾದ್ ಆಗಿದೆಯೇ ?’ ಇದನ್ನು ಸಮೀಕ್ಷಾ ವ್ಯವಸ್ಥೆಯು ಇಲ್ಲಿಯವರೆಗೆ ತನಿಖೆ ನಡೆಸಬೇಕಿತ್ತು. ಇದೇನಾದರೂ ನಿಲ್ಲಿಸದಿದ್ದರೆ, ದೊಡ್ಡ ನಷ್ಟ ಆಗುವುದು ನಿಶ್ಚಿತ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath