ಸಮೂಹ ದಾಳಿ ನಡೆಸಿದರೆ, ಒಬ್ಬನನ್ನು ಹಿಡಿದು ಸಾಯುವವರೆಗೂ ಹೊಡೆಯಿರಿ ! – ಮೌಲಾನಾ ತೌಕೀರ್ ರಝಾ

ಮೌಲಾನಾ ತೌಕೀರ್ ರಝಾನಿಂದ ಮುಸ್ಲಿಮರಿಗೆ ಪ್ರಚೋದನೆ !

ನವ ದೆಹಲಿ – ಬರೇಲಿ (ಉತ್ತರ ಪ್ರದೇಶ)ದ ‘ಇತ್ತೆಹಾದೆ ಮಿಲ್ಲತ್ ಕೌನ್ಸಿಲ್’ ಅಧ್ಯಕ್ಷ ಮೌಲಾನಾ ತೌಕೀರ್ ರಝಾ ಅವರು, ಒಂದು ವೇಳೆ ಸಮೂಹವು ನಿಮ್ಮ ಮೇಲೆ ದಾಳಿ ನಡೆಸಿದರೆ, ಆ ಗುಂಪಿನ ಒಬ್ಬನನ್ನು ಹಿಡಿದು ಅವನನ್ನು ಸಾಯುವವರೆಗೆ ಥಳಿಸಿರಿ ಎಂದು ಪ್ರಚೋದನಕಾರಿ ಹೇಳಿಕೆಯನ್ನು ನೀಡಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ, ಈ ವಿಡಿಯೋ ಸಂಭಾಜಿನಗರದ ಕಾರ್ಯಕ್ರಮವೊಂದರದ್ದು ಎನ್ನಲಾಗಿದೆ.

ಮೌಲಾನಾ ತೌಕೀರ್ ರಜಾ ಮಾತನಾಡಿ, ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕಾಗುತ್ತದೆ; ಏಕೆಂದರೆ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ, ಹಾಗೆಯೇ ಮಸೀದಿಗಳೂ ಸುರಕ್ಷಿತವಾಗಿಲ್ಲ. (ಇದಕ್ಕೆ ಹೇಳೋದು ಕಳ್ಳನಿಗೊಂದು ಪಿಳ್ಳೆ ನೆವ ಅಂತ, ಭಾರತದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಿಂದ ಹೋಗುವಾಗ ಸುರಕ್ಷಿತವಿಲ್ಲ, ಹಾಗೆಯೇ ಲವ್ ಜಿಹಾದದಿಂದ ಹಿಂದೂ ಹುಡುಗಿಯರು ಸುರಕ್ಷಿತರಾಗಿಲ್ಲ. ಇದು ವಸ್ತುಸ್ಥಿತಿಯಾಗಿದೆ ! – ಸಂಪಾದಕರು) ಸರಕಾರದ ಒತ್ತಡದಲ್ಲಿ ನ್ಯಾಯಾಲಯ ನಿರ್ಣಯ ನೀಡುತ್ತಿದೆ. ಮುಸಲ್ಮಾನರ ವಿರುದ್ಧ ಏನು ನಡೆಯುವುದೋ ಅದು ದೇಶದ್ರೋಹದ ಭಾಗವಾಗಿದೆ ಮತ್ತು ಅದೆಲ್ಲವೂ ಯೋಜಿತವಾಗಿದೆ. ಆ ವಿಷಯಗಳಲ್ಲಿ ಮುಸಲ್ಮಾನರನ್ನು ಸಿಲುಕಿಸಲು ಅವರು ಬಯಸುತ್ತಾರೆ. ನಾವು ಜಾಗರೂಕರಾಗಿರಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಮೌಲಾನಾ ತೌಕೀರ್ ರಜಾ ಯಾವಾಗಲೂ ಪ್ರಚೋದನಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ; ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ, ಇದು ಎಲ್ಲ ಪಕ್ಷಗಳ ಸರಕಾರಕ್ಕೆ ನಾಚಿಕೆಗೇಡು ! ಇನ್ನೊಂದೆಡೆ ಹಿಂದೂ ನಾಯಕರು ಹೇಳಿಕೆ ನೀಡಿದರೆ, ತಕ್ಷಣವೇ ಅವರ ವಿರುದ್ಧ ಕ್ರಮವನ್ನು ಕೈಕೊಳ್ಳಲಾಗುತ್ತದೆ !