ಅಲ್ಪಸಂಖ್ಯಾತರ ರಕ್ಷಣೆ, ಹಿಂದೂಗಳ ಬಲಿಪಶು ! – ಭಾಜಪ ಸಂಸದ ಜಗದೀಶ್ ಶೆಟ್ಟರ್ ಆರೋಪ

ಬೆಳಗಾವಿ/ಹುಬ್ಬಳ್ಳಿ – ನಾಗಮಂಗಲದಲ್ಲಿ ನಡೆದ ಹಿಂಸಾಚಾರಕ್ಕೆ ಅಲ್ಪಸಂಖ್ಯಾತರೇ ಹೊಣೆ; ಆದರೆ ಹಿಂದೂಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ತಪ್ಪಿತಸ್ಥರನ್ನು ಕಾಪಾಡಿ ಹಿಂದೂಗಳನ್ನು ಗುರಿಯಾಗಿಸುತ್ತದೆ ಎಂದು ಭಾಜಪದ ಸಂಸದ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.

ಶೆಟ್ಟರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಗಲಭೆಗಳು ಹೆಚ್ಚಾಗುತ್ತವೆ. ಶ್ರೀ ಗಣೇಶನ ಮೆರವಣಿಗೆ ಮಸೀದಿ ಮುಂದೆ ಹೋಗಬಾರದು ಎಂದು ಹೇಳಲು ಇವರಿಗೆ ಯಾವ ಹಕ್ಕಿದೆ ? ಮಸೀದಿಗೆ ಅಪಾಯವಾದರೆ ಭದ್ರತೆ ಕೊಡಿ ! ಅದರ ಬದಲು ‘ಇಲ್ಲಿ ಹೋಗಬೇಡ’ ಎಂದು ಹೇಳುವುದು ಸರಿಯೇ ? ಎಂದು ಪ್ರಶ್ನೆ ಎತ್ತಿದರು.

…ಇಲ್ಲದಿದ್ದರೆ ಹಿಂದೂಗಳೂ ಕೈಯಲ್ಲಿ ಪೆಟ್ರೋಲ್ ಬಾಂಬ್ ಮತ್ತು ಕತ್ತಿಗಳನ್ನು ತೆಗೆದುಕೊಳ್ಳುತ್ತಾರೆ ! – ಭಾಜಪ ಮಾಜಿ ಸಂಸದ ಪ್ರತಾಪ್ ಸಿಂಹ

ಸರಕಾರ ಮುಸ್ಲಿಮರಿಂದ ಪೆಟ್ರೋಲ್ ಬಾಂಬ್ ಮತ್ತು ಕತ್ತಿಗಳನ್ನು ತೆಗೆದಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಪೆಟ್ರೋಲ್ ಬಾಂಬ್, ಖಡ್ಗಗಳನ್ನು ಕೊಂಡೊಯ್ಯುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರಕಾರವೇ ಹೊಣೆಯಾಗಬೇಕಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭವ್ಯವಾದ ಶ್ರೀ ಗಣೇಶ ಮೂರ್ತಿ ಮೆರವಣಿಗೆಗಳನ್ನು ಆಯೋಜಿಸಲಾಗಿದೆ. ಮುಸ್ಲಿಂ ಗೂಂಡಾಗಳನ್ನು ಸರಕಾರ ನಿಯಂತ್ರಿಸಬೇಕು ಎಂದು ಭಾಜಪ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದರು.