Stone Pelting on Train : ಪ್ರಯಾಗ್‌ರಾಜ್-ಬಲಿಯಾ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ : 3 ಜನರ ಬಂಧನ

ಗಾಜಿಪುರ (ಉತ್ತರ ಪ್ರದೇಶ) – ಪ್ರಯಾಗ್‌ರಾಜ್-ಬಲಿಯಾ ಪ್ಯಾಸೆಂಜರ್ ರೈಲಿನ ಮೇಲೆ ಗಾಜಿಪುರದಲ್ಲಿ ಕಲ್ಲು ತೂರಾಟ ನಡೆಸಿದ ಘಟನೆ ಸೆಪ್ಟೆಂಬರ್ 10 ರಂದು ನಡೆದಿದೆ. ಈ ಪ್ರಕರಣದಲ್ಲಿ ಡ್ಯಾನಿಶ್ ಅನ್ಸಾರಿ, ಸೋನು ಕುಮಾರ ಮತ್ತು ಆಕಾಶ ಕುಮಾರ್ ಎಂಬ ಮೂವರು ಆರೋಪಿಗಳನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಅವರು ಇಲ್ಲಿನ ರೈಲ್ವೇ ಹಳಿಯ ಮೇಲೆ 3 ಮೀಟರ್ ಉದ್ದದ ತಡೆಗೋಡೆಗಳನ್ನು ಇಟ್ಟಿದ್ದರು.