ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯಿಂದ ಅನಾಥಾಶ್ರಮದ  ಮಕ್ಕಳಿಗೆ ‘ಸಂಸ್ಕಾರ ನೋಟ್ ಬುಕ್’ ವಿತರಣೆ

ಬೆಂಗಳೂರು: ಜೆಪಿ ನಗರದ ‘ಪ್ರಸನ್ನ ಜ್ಯೋತಿ’ ಹೋಂ ಫಾರ್ ಹೋಂ ಲೆಸ್ ಗರ್ಲ್ಸ್ ಆಶ್ರಮದ ಹೆಣ್ಣು  ಮಕ್ಕಳಿಗೆ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿ ವತಿಯಿಂದ ‘ಸಮಾಜ ಸಹಾಯ’ ಅಭಿಯಾನದ ಅಡಿಯಲ್ಲಿ  ಸಂಸ್ಕಾರ ನೋಟ್ ಬುಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯ ಕಾರ್ಯಕರ್ತರಾದ ಸೌ. ಕೋಮಲ ಕಾಶಿ ಇವರು ಮಕ್ಕಳಿಗೆ ಸಂಸ್ಕಾರ ವಹಿಗಳ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು ಹಾಗೂ ರಾಷ್ಟ್ರ ಪ್ರೇಮದ ವಿಷಯ, ಸನಾತನ ಧರ್ಮದ ಸಂಸ್ಕಾರಗಳ ಬಗ್ಗೆ ಮಾಹಿತಿ ನೀಡಿದರು. ಭಗವಂತನ ನಾಮಜಪ ಮಾಡುವುದರಿಂದ ಓದಿನಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಇನ್ನೂ ಹಲವಾರು ವಿಷಯಗಳನ್ನು ಮಕ್ಕಳಿಗೆ ತಿಳಿಸಿದರು. ಈ ವೇಳೆ ಸಮಿತಿಯ ಕಾರ್ಯಕರ್ತರಾದ ಸೌ. ಪಲ್ಲವಿ, ಸೌ. ಪುಣ್ಯವತಿ ಹಾಗೂ ಆಶ್ರಮದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.