ಪದೇ ಪದೇ ಬಯ್ಯುತ್ತಿದ್ದ ಎಂದು ಹೇಳಿ ಮದರಸಾದಲ್ಲಿ ಅಪ್ರಾಪ್ತ ಹುಡುಗರಿಂದ ೫ ವರ್ಷದ ಬಾಲಕನ ಹತ್ಯೆ

ನವದೆಹಲಿ – ದೆಹಲಿಯ ದಯಾಲಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ತಾಲಿಂ ಉಲ್ ಕುರಾನ್ ಎಂಬ ಹೆಸರಿನ ಮದರಸಾದಲ್ಲಿ ಮೂವರು ಅಪ್ರಾಪ್ತ ಬಾಲಕರು ಸೇರಿ ೫ ವರ್ಷದ ಬಾಲಕನ ಹತ್ಯೆ ಮಾಡಿದ್ದಾನೆ. ಪೊಲೀಸರು ಈ ಮೂವರು ಹುಡುಗರನ್ನು ಬಂಧಿಸಿದ್ದಾರೆ. ಸಾವನ್ನಪ್ಪಿರುವ ಬಾಲಕ ರುಹಾನ್ ಪದೇ ಪದೇ ಬೈಗುಳ ಬೈಯುತ್ತಿದ್ದನು. ಇದರ ಸಿಟ್ಟು ಮನಸ್ಸಿನಲ್ಲಿಟ್ಟುಕೊಂಡು ಈ ಮೂವರು ಅಪ್ರಾಪ್ತ ಹುಡುಗರು ಸೇರಿ ಅವನ ಹತ್ಯೆ ಮಾಡಿದ್ದಾರೆ. ಮದರಸಾದಲ್ಲಿನ ಸಿಸಿಟಿವಿ ಸೆರೆಹಿಡಿದಿರುವ ಮಾಹಿತಿಯ ಆಧಾರದಲ್ಲಿ ಪೊಲೀಸರು ಈ ಹುಡುಗರನ್ನು ಬಂಧಿಸಿದ್ದಾರೆ. ರುಹಾನ್ ನ ಸಾವಿನಿಂದ ಮದರಸಾದಿಂದ ಮನೆಗೆ ಹೋಗುವುದಕ್ಕಾಗಿ ಒಂದು ದಿನದ ರಜೆ ಸಿಗುವುದು ಎಂದು ಈ ಹುಡುಗರು ಅವನ ಹತ್ಯೆ ಮಾಡುವಾಗ ಯೋಚನೆ ಮಾಡಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಮದರಸಾಗಳಲ್ಲಿ ಬಲಾತ್ಕಾರ, ಹತ್ಯೆ, ಜಿಹಾದಿ ಭಯೋತ್ಪಾದನೆ ಮುಂತಾದ ಘಟನೆಗಳು ನಡೆಯುತ್ತಿದ್ದರು ಕೂಡ ಅವುಗಳಿಗೆ ಅನುದಾನ ನೀಡುತ್ತಿರುವುದು ಸರಕಾರಕ್ಕೆ ನಾಚಿಕೆಗೇಡಿನ ವಿಷಯ ! ದೇಶದಲ್ಲಿನ ಮದರಸಾಗಳನ್ನು ಶಾಶ್ವತವಾಗಿ ಮುಚ್ಚುವ ಸಮಯ ಬಂದಿದೆ. ಸರಕಾರ ಈ ರೀತಿಯ ನಿರ್ಣಯ ತೆಗೆದುಕೊಳ್ಳುವ ಧೈರ್ಯ ತೋರುವುದೇ ?