ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಮಾಡಿದ ದಾಳಿಗಳು ಅಯೋಗ್ಯ !

ಅಮೇರಿಕಾದಲ್ಲಿ ಹಿಂದೂ ಮುಖಂಡ ರಾಮಸ್ವಾಮಿ ಹೇಳಿಕೆ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಖ್ಯಾತ ಉದ್ಯಮಿ ಮತ್ತು ರಿಪಬ್ಲಿಕನ್ ಪಕ್ಷದ ಮಾಜಿ ಹಿಂದೂ ಅಭ್ಯರ್ಥಿ ವಿವೇಕ ರಾಮಸ್ವಾಮಿ ಅವರು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ರಾಮಸ್ವಾಮಿ ಅವರು ‘X’ ನಲ್ಲಿ ಪೋಸ್ಟ್ ಮಾಡಿದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾಡಿದ ದಾಳಿಗಳು ಅಯೋಗ್ಯವಾಗಿದೆ ಎಂದು ಹೇಳಿದ್ದಾರೆ. ಇದು ಆತಂಕಕಾರಿಯಾಗಿದೆ. ಸಂತ್ರಸ್ತರಿಗಾಗಿ ಮಾಡಲಾದ ಮೀಸಲಾತಿ ವ್ಯವಸ್ಥೆಗೂ ಇದು ಎಚ್ಚರಿಕೆಯಾಗಿದೆ ಎಂದು ಅವರು ಹೇಳಿದರು.