200 ರೋಹಿಂಗ್ಯಾಗಳಿಂದ ಬಂಗಾಳದಲ್ಲಿ ಹಿಂದೂ ಕುಟುಂಬದವರ ಮೇಲೆ ಹಲ್ಲೆ; ದೇವರ ಮೂರ್ತಿಗಳ ಧ್ವಂಸ !

  • ಓರ್ವ ಮುಸಲ್ಮಾನನು ಹಿಂದೂಗೆ ‘ಸಲಾಮ್ ವಾಲೆಕುಮ್’ ಹೇಳಿದ್ದರಿಂದ ಹಿಂದೂ ‘ಜೈ ಶ್ರೀ ರಾಮ್’ ಎಂದು ಹೇಳಿದಕ್ಕೆ ಕೋಪ

  • ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ

ಕೋಲಕತಾ (ಬಂಗಾಳ) – ರಾಜಧಾನಿ ಕೋಲಕತಾದಿಂದ 14 ಕಿಮೀ ದೂರದಲ್ಲಿರುವ ನಿಮತಾ ಪಾಯಿಕಪಾರಾ ಗ್ರಾಮದಲ್ಲಿ ಸುಮಾರು 200 ರೋಹಿಂಗ್ಯಾ ಮುಸ್ಲಿಮರು ಒಂದು ಹಿಂದೂ ಕುಟುಂಬದ ಮೇಲೆ ದಾಳಿ ನಡೆಸಿದ್ದಾರೆ. ರೋಹಿಂಗ್ಯಾ ಗುಂಪು ಹಿಂದೂವಿನ ಮನೆಗೆ ನುಗ್ಗಿ, ದೇವತೆಗಳ ಮೂರ್ತಿಯನ್ನು ನಾಶಪಡಿಸಿದರು. ಹಾಗೆಯೇ ಹಿಂದೂ ಕುಟುಂಬದ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದರು. ಈ ಘಟನೆಯ ವಿಡಿಯೋವನ್ನು ಭಾಜಪ ಪ್ರಸಾರ ಮಾಡಿದೆ. ಈ ವಿಡಿಯೋದಲ್ಲಿ ಸಂತ್ರಸ್ತ ಹಿಂದೂ ಮಹಿಳೆ ನಡೆದ ಘಟನೆಯನ್ನು ವಿವರಿಸುತ್ತಿರುವುದು ಕಂಡು ಬರುತ್ತಿದೆ. ಈ ದಾಳಿಯ ಹಿಂದೆ, ವಿಶ್ವಜೀತ ಮಂಡಲ ಹೆಸರಿನ ಹಿಂದೂವಿಗೆ ಓರ್ವ ಮುಸ್ಲಿಂ ‘ಸಲಾಮ್ ವಾಲೇಕುಮ್’ (ನಿಮಗೆ ಶಾಂತಿ ಸಿಗಲಿ) ಎಂದು ಹೇಳುವ ಮೂಲಕ ನಮಸ್ಕರಿಸಿದನು, ಅವನಿಗೆ ವಿಶ್ವಜೀತನು ‘ಜೈ ಶ್ರೀ ರಾಮ’ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಿದನು. ಇದನ್ನು ಗಮನಿಸಿದ ಮುಸ್ಲಿಮರು ವಿಶ್ವಜಿತ ಮನೆ ಮೇಲೆ ದಾಳಿ ಮಾಡಿದರು.

ಈ ದಾಳಿಯನ್ನು ಕುಟುಂಬದವರ ಮೇಲೆ ರಾತ್ರಿ ವೇಳೆ ಮಾಡಲಾಗಿದೆಯೆಂದು ಹೇಳಲಾಗುತ್ತಿದೆ. ಆ ಸಮಯದಲ್ಲಿ ವಿಶ್ವಜಿತ ಮಂಡಲ ಅವರ ಪತ್ನಿ ದಾಳಿಕೋರರ ಕೈಕಾಲಿಗೆ ಬಿದ್ದು, ಬೇಡಿಕೊಳ್ಳತೊಡಗಿದಳು. ಆಗ ಅವರು ಅವಳನ್ನು ತಪ್ಪು ಜಾಗದಲ್ಲಿ ಸ್ಪರ್ಶಿಸಿ `ಆದಷ್ಟು ಬೇಗನೆ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಿರಿ’ ಎನ್ನುವ ಶಬ್ದಗಳಲ್ಲಿ ಬೆದರಿಸಿದನು.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದತ್ತ ಶರವೇಗದಲ್ಲಿ ಸಾಗುತ್ತಿರುವ ಬಂಗಾಳ ರಾಜ್ಯ
  • ರೋಹಿಂಗ್ಯಾ ಮುಸಲ್ಮಾನರನ್ನು ಮರಳಿ ಕಳುಹಿಸುವಂತೆ ಕೋರುವ ಹಿಂದೂಗಳನ್ನು ಖಳನಾಯಕರೆಂದು ಹೇಳಿ ರೋಹಿಂಗ್ಯಾಗಳಿಗಾಗಿ ಧ್ವನಿಯೆತ್ತುವ ಪ್ರಗತಿಪರರು, ಮೂಲಭೂತವಾದಿಗಳು, ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸಿಗರು ಈಗ ರೋಹಿಂಗ್ಯಾಗಳ ಈ ಹಿಂಸಾಚಾರದ ಬಗ್ಗೆ ಒಂದೇ ಒಂದು ಶಬ್ದವನ್ನು ನುಡಿಯುವುದಿಲ್ಲ ಎಂಬುದನ್ನು ಗಮನಿಸಿ !
  • ಭಾರತದಲ್ಲಿ ನುಸುಳಿರುವ ರೋಹಿಂಗ್ಯಾ ಮುಸ್ಲಿಮರು ಇಲ್ಲಿನ ಬಹುಸಂಖ್ಯಾತ ಹಿಂದೂಗಳ ಮೇಲೆಯೇ ದಾಳಿ ನಡೆಸುತ್ತಾರೆ. ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ಈಗ ಹಿಂದೂಗಳು ಸಂಘಟಿತರಾಗಿ ಇಂತಹ ರೋಹಿಂಗ್ಯಾಗಳನ್ನು ಸ್ವದೇಶಕ್ಕೆ ಕಳುಹಿಸಲು ಸರಕಾರದ ಮೇಲೆ ದೊಡ್ಡ ಪ್ರಮಾಣದಲ್ಲಿ ಒತ್ತಡ ಹೇರಬೇಕು !