`ಇವರು ಹಿಂದೂಗಳು ಕೊಲ್ಲಿರಿ’ ಎಂದು ಹೇಳುತ್ತಾ ಹಿಂದೂ ಕುಟುಂಬದ ಮೇಲೆ ಮತಾಂಧರಿಂದ ದಾಳಿ

  • ಗಾಂಧಿನಗರ (ಗುಜರಾತ)ದ ಘಟನೆ

  • ಒಬ್ಬ ಗಂಭೀರ ಗಾಯ

ಗಾಂಧಿನಗರ (ಗುಜರಾತ) – ರಾಜಕೋಟನಲ್ಲಿ ಪೂಜೆಗಾಗಿ ಮಂಟಪವನ್ನು ನಿರ್ಮಿಸುವ ಹಿಂದೂ ಕುಟುಂಬದ ಮೇಲೆ 4 ಮತಾಂಧ ಮುಸಲ್ಮಾನರು ದಾಳಿ ನಡೆಸಿದರು. ಇದರಲ್ಲಿ ಓರ್ವ ಹಿಂದೂ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇಲ್ಲಿ ಜಗದೀಶಭಾಯಿ ವಾಘೇಲ ಇವರು ಮಂಟಪ ನಿರ್ಮಿಸುವ ಕೆಲಸವನ್ನು ಮಾಡುತ್ತಾರೆ. ಅವರ ಹಿರಿಯ ಪುತ್ರ ಮಿಹಿರ ಮತ್ತು ಕಿರಿಯ ಪುತ್ರ ಆಶಿಷ `ಫಾಸ್ಟ ಫುಡ’ ಮಾರಾಟ ಮಾಡುವ ಕೆಲಸ ಮಾಡುತ್ತಾರೆ. ಈ ಘಟನೆಯ ವಿಷಯದಲ್ಲಿ ಮಿಹಿರ ಮಾತನಾಡಿ, ನನ್ನ ತಂದೆಯವರು ಪೂಜೆಯ ಮಂಟಪವನ್ನು ನಿರ್ಮಿಸಲು ಅಶಾಬಪೀರ ದರ್ಗಾ ಹತ್ತಿರ ಹೋಗಿದ್ದರು. ಆ ಸ್ಥಳದಲ್ಲಿ ಮಂಟಪವನ್ನು ನಿರ್ಮಿಸುವ ಕೆಲಸ ಪ್ರಾರಂಭವಾಗಿತ್ತು. ಆ ಸಮಯದಲ್ಲಿ ಕೆಲವು ಮುಸಲ್ಮಾನರು ತಂದೆಯವರಿಗೆ ಅಲ್ಲಿನ ರಸ್ತೆಯಿಂದ ಹೋಗಲು ತಡೆದಿದ್ದರು. ತಂದೆಯವರು ಮನೆಗೆ ಬಂದ ಬಳಿಕ ನಡೆದ ಘಟನೆಯನ್ನು ವಿವರಿಸಿದ್ದರು. ಆಗ ಆಕಸ್ಮಿಕವಾಗಿ ನಮ್ಮ ಮನೆಗೆ ಸಿಕಂದರ, ಅಫ್ಜಲ, ದರೇದ ಮತ್ತು ಸಮೀರ ಈ 4 ಸಹೋದರರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ನಮ್ಮ ಮೇಲೆ ದಾಳಿ ನಡೆಸಿದರು. ಆಗ ನಮ್ಮ ತಂದೆ-ತಾಯಿ ನಮ್ಮನ್ನು ರಕ್ಷಿಸುವ ಪ್ರಯತ್ನ ಮಾಡಿದಾಗ ಅವರ ಮೇಲೆಯೂ ದಾಳಿ ನಡೆಸಿದರು. ಆ ಸಮಯದಲ್ಲಿ ನನ್ನ ಕಿರಿಯ ಸಹೋದರ ಆಶಿಷ್ ಮೇಲೆ ಚಾಕುವಿನಿಂದ ದಾಳಿ ನಡೆಸಿದರು. ಅವನಿಗೆ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸುತ್ತಿರುವಾಗ `ಇವರು ಹಿಂದೂಗಳು ಇವರು ಮತ್ತೆ ಯಾವತ್ತೂ ಮೇಲೇಳದಂತೆ ಹೊಡೆಯಿರಿ’ ಎಂದು ದಾಳಿಕೋರರು ಹೇಳುತ್ತಿದ್ದರು ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

ಗುಜರಾತನಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಮೇಲೆ ಮತಾಂಧ ಮುಸ್ಲಿಮರಿಂದ ದಾಳಿ ನಡೆಯುತ್ತಿರುವುದನ್ನು ಹಿಂದೂಗಳು ನಿರೀಕ್ಷಿಸಿರಲಿಲ್ಲ !