Firhad Hakim : ‘ನಾನು ಮುಸ್ಲಿಂ ಆಗಿದ್ದರೂ ಯಾವಾಗಲೂ ದುರ್ಗಾ ಪೂಜೆಯ ಆಯೋಜನೆ ಮಾಡುತ್ತೇನೆ (ಅಂತೆ) ! – ಬಂಗಾಲದ ಸಚಿವ ಫಿರಹಾದ ಹಕೀಂ

ಇಸ್ಲಾಂನಲ್ಲಿ ಹುಟ್ಟದವರು ದುರದೃಷ್ಟಕರರು ಎಂದು ಹೇಳಿದ್ದ ಬಂಗಾಲದ ಸಚಿವ ಫಿರಹಾದ ಹಕೀಮ್ ನ ಹೊಸ ದಾವೆ !

ಬಂಗಾಲದ ಸಚಿವ ಫಿರಹಾದ ಹಕೀಮ್

ಕೊಲಕಾತಾ (ಬಂಗಾಲ) – ಬಂಗಾಲ ರಾಜ್ಯ ಸರಕಾರದ ಸಚಿವ ಮತ್ತು ಕೊಲಕಾತಾದ ಮಹಾಪೌರ ಫಿರಹಾದ ಹಕೀಮ್ ಇವರು ಕಳೆದ ತಿಂಗಳು, ಇಸ್ಲಾಂನಲ್ಲಿ ಹುಟ್ಟದವರು ದುರದೃಷ್ಟಕರರು, ನಾವು (ಮುಸಲ್ಮಾನರು) ಅವರನ್ನು ಇಸ್ಲಾಂನ ಪರಿಧಿಗೆ ಕರೆತರಬೇಕು.’ ಅವರ ಈ ಹೇಳಿಕೆಗೆ ವಿರೋಧವಾದ ನಂತರ ಅವರು ಈಗ ಬಂಗಾಲ ವಿಧಾನಸಭೆಯಲ್ಲಿ ಆಗಸ್ಟ್ ೧ ರಂದು ಹೊಸ ದಾವೆ ಮಾಡಿದ್ದಾರೆ. ಅವರು, ನಾನು ಮುಸ್ಲಿಂ ಆಗಿದ್ದರೂ ದುರ್ಗಾ ಪೂಜೆ ಮತ್ತು ಕಾಲಿ ಪೂಜೆಯ ಆಯೋಜನೆ ನಿರಂತರ ಮಾಡುತ್ತೇನೆ ಎಂದು ದಾವೆ ಮಾಡಿದರು.

ಹಕೀಮ್ ಮಾತು ಮುಂದುವರೆಸುತ್ತಾ, ಯಾವಾಗ ನಾನು ಯಾವುದಾದರೂ ಪ್ರಶ್ನೆಯ ಉತ್ತರ ನೀಡುವುದಕ್ಕಾಗಿ (ವಿಧಾನಸಭೆಯಲ್ಲಿ) ನಿಲ್ಲುತ್ತೇನೆ, ಆಗ ಭಾಜಪದ ಶಾಸಕರು ಸಂಸತ್ತಿನಿಂದ ಹೊರಹೋಗುತ್ತಾರೆ. ನನ್ನ ಎಲ್ಲಾ ಟಿಪ್ಪಣಿಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದ್ದರೆ, ನಾನು ಏನು ಮಾಡಲು ಸಾಧ್ಯ ? ಭಾಜಪದವರು ನನ್ನನ್ನು ಜಾತ್ಯತೀತ ಎಂದು ನಂಬುತ್ತಾರೆ ಅಥವಾ ಇಲ್ಲ? ನಾನು ಎಂದಿಗೂ ಕೂಡ ಇತರ ಯಾವುದೇ ಧರ್ಮದ ಜನರ ಅವಮಾನ ಮಾಡಿಲ್ಲ ಮತ್ತು ನನ್ನ ಕೊನೆಯ ಉಸಿರು ಇರುವ ವರೆಗೆ ನಾನು ಹಾಗೆ ಮಾಡುವುದಿಲ್ಲ. ಯಾರನ್ನೂ ನೋಯಿಸುವ ಉದ್ದೇಶ ನನ್ನದಾಗಿಲ್ಲ. ನನ್ನ ಜನ್ಮ ಜಾತ್ಯತೀತ ಕುಟುಂಬದಲ್ಲಿ ಆಗಿದೆ ಮತ್ತು ಭವಿಷ್ಯದಲ್ಲಿ ಕೂಡ ನಾನು ಜಾತ್ಯತೀತವಾಗಿ ಇರುವೆ ಎಂದು ಹೇಳಿದ್ದಾರೆ. (ಹಾಗಾದರೆ ಹಕೀಂ ಇವರ ಜಾತ್ಯತೀತತೆಯ ಜ್ಞಾನ ಬಂಗಾಲದಲ್ಲಿನ ಮುಸಲ್ಮಾನರಿಗೂ ಕೂಡ ನೀಡಬೇಕು ಮತ್ತು ಅಲ್ಲಿಯ ಹಿಂದುಗಳ ರಕ್ಷಣೆಯ ಕಾಳಜಿ ವಹಿಸಬೇಕು, ಇಲ್ಲವಾದರೆ ಇದೆಲ್ಲವೂ ಆಚಾರ ಹೇಳುವುದು ಬದನೆಕಾಯಿ ತಿನ್ನುವುದು ಎಂಬಂತೆ ಆಗುತ್ತದೆ ಇದನ್ನು ಬೇರೆ ಹೇಳಬೇಕಿಲ್ಲ ! – ಸಂಪಾದಕರು)

ಸಂಪಾದಕೀಯ ನಿಲುವು

  • ಫಿರಹಾದನ ‘ಇಸ್ಲಾಂನಲ್ಲಿ ಹುಟ್ಟದವರು ದುರದೃಷ್ಟಕರರು’ ಈ ಹೇಳಿಕೆಯಿಂದ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ? ಇದು ಸ್ಪಷ್ಟವಾಗುತ್ತದೆ ! ಇಂತಹವರ ಜಾತ್ಯತೀತತೆಯ ಬಗ್ಗೆ ಎಷ್ಟು ಕೆಟ್ಟ ಇದೆ, ಇದನ್ನು ಹಿಂದುಗಳೇ ಅರಿಯಬೇಕು !
  • ದುರ್ಗಾ ಪೂಜೆಯ ಆಯೋಜನೆ ಮಾಡುವ ಫಿರಹಾದ ಇವರು ದುರ್ಗಾ ಪೂಜೆಯಲ್ಲಿ ಅವರ ಧರ್ಮಬಾಂಧವರಿಂದ ನಡೆಯುವ ದಾಳಿಯ ಬಗ್ಗೆ ಎಂದು ಏನು ಮಾತನಾಡುವುದಿಲ್ಲ ? ಅಥವಾ ಈ ದಾಳಿಗಳನ್ನು ತಡೆಯುವ ಪ್ರಯತ್ನ ಏಕೆ ಮಾಡಲಿಲ್ಲ ?