Kashmir Terrorist Attack : ರಜೌರಿ: ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕನಿಗೆ ಗಾಯ

ರಜೌರಿ (ಜಮ್ಮು- ಕಾಶ್ಮೀರ) – ರಜೌರಿ ಜಿಲ್ಲೆಯ ಗುಂಡಾ ಖವಾಸ್ ಗ್ರಾಮದಲ್ಲಿ ಸೇನೆಯ ಭದ್ರತಾ ನೆಲೆಯ ಮೇಲೆ ಜಿಹಾದಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಸೈನಿಕ ಗಾಯಗೊಂಡಿದ್ದಾನೆ. ಭಯೋತ್ಪಾದಕರ ಹಠಾತ್ ದಾಳಿಗೆ ಯೋಧರು ಪ್ರತಿದಾಳಿ ಮಾಡಿದರು.

ಈ ಪ್ರದೇಶದಲ್ಲಿರುವ ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ ಪರಶೋತ್ತಮ್ ಕುಮಾರ್ ಅವರು ಜಿಹಾದಿ ಭಯೋತ್ಪಾದಕರ ಗುರಿಯಾಗಿದ್ದರು ಎಂದು ಹೇಳಲಾಗಿದೆ. ಪರಶೋತ್ತಮ್ ಅವರ ಮೇಲೆ ದಾಳಿಯಾಗುವ ಸಾಧ್ಯತೆ ಇದೆಯೆಂದು ಅಲ್ಲಿ ಭದ್ರತಾ ಠಾಣೆ ಸ್ಥಾಪಿಸಲಾಗಿತ್ತು. ಕಾಲಾಕೋಟ್ ಪ್ರದೇಶದಲ್ಲಿ ಉಗ್ರರ ದಾಳಿಯ ವೇಳೆ ಪರಶೋತ್ತಮ್ ಕುಮಾರ್ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಭಾರತೀಯ ಸೇನೆಗೆ ಸಹಾಯ ಮಾಡಿದ್ದರು.