ಬುದ್ಧಿಮಾಂದ್ಯ ಹಿಂದೂ ಹುಡುಗಿಯ ಮೇಲೆ ಅನ್ಯಕೋಮಿನ ವ್ಯಕ್ತಿಯಿಂದ ಬಲಾತ್ಕಾರದ ಪ್ರಯತ್ನ

ಬೆಳಗಾವಿ – ಇಲ್ಲಿಯ ಕಾಕತಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಓರ್ವ ಬುದ್ಧಿಮಾಂದ್ಯ ಹಿಂದೂ ಹುಡುಗಿಯ ಮೇಲೆ ಅಪರಿಚಿತ ಅನ್ಯಕೋಮಿನ ವ್ಯಕ್ತಿಯಿಂದ ಬಲಾತ್ಕಾರ ಮಾಡುವ ಪ್ರಯತ್ನದ ಘಟನೆ ನಡೆದಿದೆ. ಹುಡುಗಿಯ ತಂದೆ ತಾಯಿ ಹೊಲಕ್ಕೆ ಹೋಗಿರುವಾಗ ಆರೋಪಿಯು ಹುಡುಗಿಯ ಮನೆಗೆ ನುಗ್ಗಿ ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದಾನೆ. ಹುಡುಗಿ ಜೋರಾಗಿ ಕಿರುಚಿರುವುದರಿಂದ ಹುಡುಗಿಯ ಸೋದರಸಂಬಂಧಿ ತಕ್ಷಣ ಮನೆಗೆ ಬಂದಿದ್ದಾರೆ. ಅವರು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಆ ಸಮಯದಲ್ಲಿ ಅವನು ಪ್ರಜ್ಞೆ ತಪ್ಪಿರುವ ನಾಟಕ ಮಾಡಿದನು ಮತ್ತು ನಂತರ ಅಲ್ಲಿಂದ ಪಲಾಯನ ಮಾಡಿದನು. ಈ ಘಟನೆಯ ಮಾಹಿತಿ ಪೊಲೀಸರಿಗೆ ನೀಡಲಾಗಿದ್ದು ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !