ಪಂಢರಪುರಕ್ಕೆ ಹೊರಟಿದ್ದ ವಾರಕರಿಗಳ ಬಸ್ ಅಪಘಾತ; 5 ವಾರಕರಿಗಳ ಸಾವು !

ಮುಂಬಯಿ-ಪುಣೆ ಹೆದ್ದಾರಿಯ ಪಬ್ವೆಲ್ ಬಳಿ ಘಟನೆ !

ಮುಂಬಯಿ – ಆಷಾಢಿ ಏಕಾದಶಿಯಂದು ಮುಂಬಯಿಯಿಂದ ಪಂಢರಪುರಕ್ಕೆ ತೆರಳುತ್ತಿದ್ದ ಬಸ್ ಜುಲೈ 15 ರ ರಾತ್ರಿ ಮುಂಬಯಿ-ಪುಣೆ ಹೆದ್ದಾರಿಯ ಪನ್ವೆಲ್ ಬಳಿ ಭೀಕರ ಅಪಘಾತಕ್ಕೀಡಾಗಿದೆ. ಇದ್ದಕ್ಕಿದ್ದಂತೆ ಬಸ್ಸಿನ ಮುಂದೆ ಟ್ರ್ಯಾಕ್ಟರ್ ಬಂದಿತು. ಇದರಿಂದ ಚಾಲಕನು ನಿಯಂತ್ರಣ ಕಳೆದುಕೊಂಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ ಹೊಡೆದು 20 ಅಡಿ ಆಳದ ಕಂದರಕ್ಕೆ ಬಿದ್ದಿದೆ. ಅಪಘಾತ ಎಷ್ಟು ತೀವ್ರವಾಗಿತ್ತು ಎಂದರೆ ಎರಡೂ ವಾಹನಗಳು ಭಾಗಶಃ ನಜ್ಜುಗುಜ್ಜಾಗಿವೆ. ಬಸ್ಸಿನಲ್ಲಿ 54 ಮಂದಿ ಇದ್ದರು. ಅವರಲ್ಲಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಎಂ.ಜಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.