Attempt to Convert Hindus: ಮುಂಬಯಿಯಲ್ಲಿ ಕ್ರೈಸ್ತರಿಂದ ಹಿಂದೂಗಳ ಮತಾಂತರಕ್ಕೆ ಪ್ರಯತ್ನ !

  • ಆಮಿಷ ತೋರಿಸಿ ಮತಾಂತರದ ಪ್ರಯತ್ನ

  • ಪ್ರಭಾದೇವಿಯಲ್ಲಿನ ಕೇಂದ್ರ ನಡೆಸುವವನ ವಿರುದ್ಧ ದೂರು ದಾಖಲು

  • ಭಾಜಪದ ಅಕ್ಷತಾ ತೆಂಡೂಲ್ಕರ್ ಇವರಿಂದ ಕೇಂದ್ರದ ಪರಿಶೀಲನೆ

ಮುಂಬಯಿ – ಪ್ರಭಾದೇವಿ ಪ್ರದೇಶದಲ್ಲಿನ ದೈನಿಕ ‘ಸಾಮನಾ’ ಈ ಕಾರ್ಯಾಲಯದ ಎದುರು ಹಿಂದುಗಳ ಮತಾಂತರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪ್ರಭಾದೇವಿಯಲ್ಲಿನ ಕಾಮಗಾರನಗರ ಪ್ರದೇಶದಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಇಲ್ಲಿ ಹಿಂದುಗಳನ್ನು ಮತಾಂತರಗೊಳಿಸುವುದಕ್ಕಾಗಿ ಕ್ರೈಸ್ತರಿಂದ ಪ್ರವಚನ ನಡೆಯುತ್ತಿರುವುದರ ಕುರಿತು ಭಾಜಪದ ಮಾಹಿಮ ವಿಧಾನಸಭೆಯ ಕ್ಷೇತ್ರದ ಅಧ್ಯಕ್ಷೆ ಅಕ್ಷತಾ ತೆಂಡೂಲ್ಕರ್ ಇವರು ಆರೋಪಿಸಿದ್ದಾರೆ. ‘ಜೀವನ ಜ್ಯೋತಿ ಪ್ರಾರ್ಥನಾ ಸತ್ಸಂಗ ಕೇಂದ್ರ’ ಎಂದು ಹಿಂದೂ ಹೆಸರು ಇರುವ ಸ್ಥಳದಲ್ಲಿ ಹಿಂದೂಗಳಿಗೆ ನಾನಾ ರೀತಿಯ ಆಮೀಷಗಳನ್ನು ತೋರಿಸಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ತೆಂಡೂಲ್ಕರ್ ಇವರು ಆರೋಪಿಸಿದ್ದಾರೆ. ದಾದರ್ ನಂತಹ ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿವೆ. ಈ ಕುರಿತು ದೂರು ಮತ್ತು ಕಾನೂನು ರೀತಿಯ ಅರ್ಜಿ ಪೊಲೀಸರಿಗೆ ನೀಡಲಾಗಿದೆ. ಈ ಕೇಂದ್ರ ನಡೆಸುತ್ತಿರುವ ಪ್ರಫುಲ್ಲ ಆಗಾರೆ ಇವರ ಮೇಲೆ ಅಂಧಶ್ರದ್ಧಾ ನಿರ್ಮೂಲನ ಕಾನೂನಿನ ಮೂಲಕ ಅರ್ಜಿ ಕೂಡ ದಾಖಲಿಸಲಾಗಿದೆ. (ಮತಾಂತರಗೊಂಡಿರುವ ಕ್ರೈಸ್ತ ಹಿಂದಿನ ಹಿಂದೂ ಹೆಸರು ಹಾಗೆಯೇ ಇಟ್ಟುಕೊಳ್ಳುತ್ತಾರೆ; ಕಾರಣ ಅವರಿಗೆ ಹಿಂದೂ ಸಮಾಜದಲ್ಲಿ ಬೆರೆತು ಹಿಂದುಗಳ ಮತಾಂತರ ಮಾಡುವುದು ಸುಲಭವಾಗುತ್ತದೆ. ಇದೇ ಇದರಿಂದ ಕಂಡು ಬರುತ್ತದೆ ! -ಸಂಪಾದಕರು)

೧. ಅಕ್ಷತಾ ತೆಂಡೂಲ್ಕರ್ ಇವರ ಬಳಿ ಕೆಲವು ದೂರುಗಳು ಬಂದ ನಂತರ ಅವರು ನೇರ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲೇ ಪ್ರಫುಲ್ಲ ಆಗಾರೆ ಪ್ರವಚನ ನೀಡುತ್ತಿದ್ದರು. ಆ ಸಮಯದಲ್ಲಿ ಅವರು, ‘ನೀನು ನಿಜವಾದ ಪರಮೇಶ್ವರನಾಗಿರುವೆ, ನೀನು ಎಲ್ಲವನ್ನೂ ತಿಳಿದಿರುವೆ. ಹಾಲೆಲೂಯಾ ಹಾಲೆಲೂಯಾ ಹಾಲೆಲೂಯಾ! ಹಾಲೆಲೂಯಾ ಈ ಶಬ್ದದ ಅರ್ಥ, ದೇವರನ್ನು ಸ್ತುತಿಸಿ. ಇದು ಹಿಬ್ರೂ ಶಬ್ದವಾಗಿದೆ ಎಂದು ಹೇಳಿದರು. ಅದರ ನಂತರ ಕುಳಿತಿರುವ ಎಲ್ಲಾ ಹಿಂದುಗಳು ‘ಹಾಲೆಲೂಯಾ’ ಈ ಶಬ್ದವನ್ನು ಉಚ್ಚರಿಸಿದರು. (ಹಿಂದುಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಈ ರೀತಿಯ ಕ್ರೈಸ್ತ ಪದಗಳನ್ನು ಉಚ್ಚರಿಸುತ್ತಾರೆ ! – ಸಂಪಾದಕರು)

೨. ಅಕ್ಷತಾ ತೆಂಡೂಲ್ಕರ್ ಇವರು ಪ್ರವಚನಕಾರರಿಗೆ, ‘ಈ ಜನರು ಕ್ರೈಸ್ತರಿದ್ದಾರೆ ಅಥವಾ ಹಿಂದುಗಳು?’ ಎಂದು ಕೇಳಿದಾಗ ಅವರು, ‘ಹಿಂದೂ ಆಗಿದ್ದಾರೆ’ ನಾನು ಕೂಡ ಹಿಂದೂವೇ ಆಗಿರುವೆ ಎಂದು ಹೇಳಿದರು. ಆಗ ತೆಂಡೂಲ್ಕರ್ ಇವರು, ”ನೀವು ಹಿಂದೂ ಆಗಿರುವಾಗ ಇಂತಹ ಪ್ರವಚನಗಳು ಏಕೆ ನೀಡುತ್ತೀರಾ? ಹಿಂದೂಗಳಿಗೆ ದೇವರು ಇಲ್ಲವೇ? ಎಂದು ಹೇಳಿದಾಗ ಅಕ್ಷತಾ ತೆಂಡೂಲ್ಕರ್ ಮತ್ತು ಅಲ್ಲಿ ಸೇರಿರುವ ಮಹಿಳೆಯರು ಪ್ರವಚನಕಾರನ ಜೊತೆಗೆ ವಾದಿಸಿದರು.

೩. ಸ್ಥಳೀಯರ ಪ್ರಕಾರ, ಪ್ರಭಾದೇವಿ ಇಲ್ಲಿ ಅಕ್ರಮ ಮತಾಂತರ ಕೇಂದ್ರ ನಡೆಯುತ್ತಿದೆ. ಇಲ್ಲಿ ಹಿಂದುಗಳಿಗೆ ದೇವತೆಗಳ ಬಗ್ಗೆ ನಕರಾತ್ಮಕವಾಗಿ ಮಾತನಾಡಿ ಹಿಂದುಗಳ ಮನಸ್ಸನ್ನು ಬದಲಾಯಿಸುತ್ತಾರೆ. ಈ ಕೇಂದ್ರ ಒಳಗೆ ಇರುವುದರಿಂದ ಈ ರೀತಿಯ ದುರುಪಯೋಗ ಮಾಡುತ್ತಾರೆ. ಈ ಕೇಂದ್ರದಲ್ಲಿ ಶೇಕಡ ೯೯ ಹಿಂದೂಗಳೇ ಇರುವರು. ಅದರಲ್ಲಿ ಮಹಿಳೆಯರ ಸಮಾವೇಶ ಹೆಚ್ಚಾಗಿತ್ತು. ಈ ಕೇಂದ್ರದಲ್ಲಿ ಕ್ಯಾಮೆರಾಗಳು ಅಳವಡಿಸಿದ್ದಾರೆ. ಇದಕ್ಕೆ ಮಿಶಿನರಿಗಳಿಂದ ಧನ ಸಹಾಯ ದೊರೆಯುತ್ತದೆ. ಈ ನಿಧಿಗಳು ವಿದೇಶದಿಂದ ಬರುತ್ತದೆ. (ಇದರ ಶೋಧ ಕೂಡ ನಡೆಸಿ ನಿಧಿ ಪೂರೈಸುವವರ ಮೇಲೆ ಕೂಡ ಕಾರ್ಯಾಚರಣೆ ನಡೆಯಬೇಕು ! – ಸಂಪಾದಕರು) ಇಲ್ಲಿ ಬ್ಲಾಕ್ ಮ್ಯಾಜಿಕ್ ಮತ್ತು ಸಂಮೋಹನ ಕೂಡ ನಡೆಸುತ್ತಾರೆ ಎಂದು ಆರೋಪವಿದೆ.

೪. ಈ ಕೇಂದ್ರದಲ್ಲಿ ಓರ್ವ ಮಹಿಳೆಗೆ ಮೂತ್ರಪಿಂಡದ ತೊಂದರೆ ಇತ್ತು. ಆಗ ಪ್ರಫುಲ್ಲ ಆಗಾರೆ ಇವರು, ‘ನೀವು ಆಧುನಿಕ ವೈದ್ಯರ ಬಳಿಗೆ ಹೋಗದೆ ಪ್ರಾರ್ಥನೆಗೆ ಬನ್ನಿ. ನಮ್ಮ ದೇವರು ನಿಮಗೆ ವಾಸಿ ಮಾಡುವನು. ಎಂದು ಹೇಳಿದ್ದರು. (ಅಂನಿಸದವರು ಇಂತಹ ಸಮಯದಲ್ಲಿ ಎಲ್ಲಿ ಇರುತ್ತಾರೆ ? – ಸಂಪಾದಕರು) ಪ್ರತ್ಯಕ್ಷದಲ್ಲಿ ನಂತರ ಆ ಮಹಿಳೆ ಸಾವನ್ನಪ್ಪಿದಳು.

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಕ್ರೈಸ್ತರು ಹಿಂದೂಗಳ ಮತಾಂತರ ಮಾಡಲು ಪ್ರಯತ್ನಿಸುವುದು, ಇದಕ್ಕೆ ಹಿಂದುಗಳು ಸಂಘಟಿತ ಇಲ್ಲದಿರುವುದೇ ಕಾರಣವಾಗಿದೆ ! ಧರ್ಮಪ್ರೇಮಿ ಹಿಂದುಗಳು ಈ ಕೇಂದ್ರ ಬಂದ್ ಮಾಡಲು ನ್ಯಾಯಯುತವಾಗಿ ಪ್ರಯತ್ನಿಸಬೇಕು !