Muslims Try To Kill Pujari: ಮತಾಂಧ ಮುಸಲ್ಮಾನರಿಂದ ದೇವಸ್ಥಾನದ ಅರ್ಚಕನ ಶಿರಚ್ಛೇದನದ ಪ್ರಯತ್ನ

  • ಫರಿದಾಬಾದ (ಹರಿಯಾಣ)ನಲ್ಲಿರುವ ಶ್ರೀ ಕಾಳಿಮಾತಾ ದೇವಸ್ಥಾನದ ಹೊರಗಿನ ಘಟನೆ

  • ಗಂಭೀರವಾಗಿ ಗಾಯಗೊಂಡಿರುವ ಅರ್ಚಕರು

ಫರಿದಾಬಾದ (ಹರಿಯಾಣ) – ಇಲ್ಲಿ ಜೂನ್ 28 ರಂದು ಇಕ್ಬಾಲ ಮತ್ತು ಮೆಹತಾಬರು ತಮ್ಮ ಸಹಚರರೊಂದಿಗೆ ರವಿ ಭಗತ ಎಂಬ ಹೆಸರಿನ ಅರ್ಚಕರ ಶಿರಚ್ಛೇದಗೊಳಿಸಲು ಪ್ರಯತ್ನಿಸಿದರು. ಈ ಘಟನೆ ದೇವಸ್ಥಾನದ ಎದುರಿಗೆ ನಡೆದಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅರ್ಚಕರಾದ ರವಿ ಭಗತ ರವರ ಮೇಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಪೊಲೀಸರು ಮುಸ್ಲಿಂ ಆರೋಪಿಗಳನ್ನು ಹುಡುಕುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ. ಈ ಪ್ರಕರಣದಲ್ಲಿ ಗೋರಕ್ಷಕ ಬಿಟ್ಟು ಬಜರಂಗಿಯವರು ಫರಿದಾಬಾದನಲ್ಲಿರುವ ಘಟನಾ ಸ್ಥಳದಲ್ಲಿ ಹಿಂದೂ ಪಂಚಾಯತನ್ನು ಆಯೋಜಿಸುವುದಾಗಿ ಘೋಷಿಸಿದ್ದಾರೆ.

1. ಇಲ್ಲಿನ ಜನತಾ ಕಾಲೋನಿಯಲ್ಲಿ ಶ್ರೀ ಕಾಳಿಮಾತೆಯ ದೇವಸ್ಥಾನವಿದೆ. ರವಿ ಭಗತರವರು ಈ ದೇವಸ್ಥಾನದ ಮೇಲ್ವಿಚಾರಣೆ ಮತ್ತು ಪೂಜೆಯನ್ನು ಮಾಡುತ್ತಾರೆ. ಅವರು ಜೂನ್ 28 ರ ರಾತ್ರಿ ದೇವಸ್ಥಾನದ ಹೊರಗಿನ ಮಂಚದ ಮೇಲೆ ಮಲಗಿದ್ದರು. ಆಗ ಇಕ್ಬಾಲ, ಮೆಹತಾಬ ಮತ್ತು ಅವರ ಸಹಚರರು ಭಗತರವರ ಬಳಿ ಬಂದರು ಮತ್ತು ಅವರನ್ನು ಹಿಡಿದು ಚಾಕುವಿನಿಂದ ಅವರ ಕುತ್ತಿಗೆ ಕೊಯ್ಯಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಅವರ ಚಿಕ್ಕ ಮಗಳು ಕಿರುಚಾಡಿದ್ದರಿಂದ ಕೆಲವು ಜನರು ಧಾವಿಸಿ ಬಂದರು, ಆಗ ಆರೋಪಿಗಳು ಪರಾರಿಯಾದರು.

2. ಪೊಲೀಸರು ನೀಡಿರುವ ಮಾಹಿತಿಯನುಸಾರ ಇದುವರೆಗಿನ ತನಿಖೆಯಲ್ಲಿ ಧಾರ್ಮಿಕ ಮತಾಂಧತೆಯ ಯಾವುದೇ ದಾಖಲೆಗಳು ಕಂಡು ಬಂದಿರುವುದಿಲ್ಲ. ಆದರೆ ಎಲ್ಲ ಆಯಾಮಗಳಿಂದ ತನಿಖೆಯನ್ನು ನಡೆಸಲಾಗುತ್ತಿದೆ.

ಸಂಪಾದಕೀಯ ನಿಲುವು

ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಮೇಲೆ ಈ ರೀತಿ ದಾಳಿಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ.