Hindu Shopkeeper Attacked: ಕಥಿತ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ ಆರೋಪ; ಹಿಂದೂ ಯುವಕನ ಅಂಗಡಿ ಧ್ವಂಸ ಮಾಡಿದ ಮುಸ್ಲಿಮರು

ಗಾಯಗೊಂಡ ಹಿಂದೂ ಯುವಕ

ಬುರಹಾನಪೂರ (ಮಧ್ಯಪ್ರದೇಶ) – ಬುರಹಾನಪೂರ ಜಿಲ್ಲೆಯಲ್ಲಿ ಹಿಂದೂ ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಾರ ಮಾಡಿದ ಪೋಸ್ಟ್‌ನಿಂದಾಗಿ, ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಮುಸ್ಲಿಮರು ಅವನ ಅಂಗಡಿಯ ಮೇಲೆ ದಾಳಿ ಮಾಡಿ ಅಂಗಡಿ ಧ್ವಂಸಗೊಳಿಸಿರುವುದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಈ ಪ್ರಕರಣದಲ್ಲಿ ಅಫ್ತಾಬ್, ರಮಜಾನ್, ಅರ್ಬಾಜ ತಡವಿ ಸೇರಿದಂತೆ ಕೆಲವು ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ದಾಳಿ ಮಾಡಿದವರಲ್ಲಿ ಇಲ್ಲಿಯವರೆಗೆ 8 ಮಂದಿಯನ್ನು ಬಂಧಿಸಲಾಗಿದೆ ಹಾಗೂ ಇನ್ನು 5 ಮಂದಿ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಗಾಯಗೊಂಡ ಸುಮಿತ್ ಎಂಬಾತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.