Indian Army Soldiers Killed: ಲಡಾಖನಲ್ಲಿ ಯುದ್ಧವಾಹನಗಳ ಅಭ್ಯಾಸದ ಸಮಯದಲ್ಲಿ ನಡೆದ ಅಪಘಾತದಲ್ಲಿ 5 ಸೈನಿಕರ ಸಾವು

ಲೇಹ (ಲಡಾಖ) – ಲಡಾಖನ ದೌಲತ ಬೇಗ ಓಲ್ಡಿ ಪ್ರದೇಶದಲ್ಲಿ ನದಿ ದಾಟುವ ಅಭ್ಯಾಸದ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ 5 ಸೈನಿಕರು ಸಾವನ್ನಪ್ಪಿದ್ದಾರೆ. ಕೆ. ರೆಡ್ಡಿ, ಭೂಪೇಂದ್ರ ನೇಗಿ, ಅಕ್ದುಮ ತಯಾಬಮ, ಎ. ಖಾನ ಮತ್ತು ನಾಗರಾಜ ಪಿ. ಇವು ಈ ಸೈನಿಕರ ಹೆಸರುಗಳಾಗಿವೆ. ‘ಟಿ-72’ ಯುದ್ಧವಾಹನವು ನದಿಯನ್ನು ದಾಟುತ್ತಿದ್ದಾಗ ಅನಿರೀಕ್ಷಿತವಾಗಿ ನದಿಯ ನೀರಿನ ಮಟ್ಟದಲ್ಲಿ ಹಠಾತ ಏರಿಕೆಯಾಗಿ ಈ ಅಪಘಾತ ಸಂಭವಿಸಿದೆ. ಈ ಘಟನೆಯು ಮಧ್ಯರಾತ್ರಿ 1 ಗಂಟೆಗೆ ನಡೆದಿದೆ. ಯುದ್ಧವಾಹನದಲ್ಲಿದ್ದ ಯೋಧರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. T-72 ಯುದ್ಧವಾಹನವು 3 ಜನರನ್ನು ಒಯ್ಯುತ್ತದೆ; ಆದರೆ ಅಭ್ಯಾಸ ನಡೆಯುತ್ತಿದ್ದಾಗ ಅದರಲ್ಲಿ 5 ಜನ ಸೈನಿಕರಿದ್ದರು. ಈ ಯುದ್ಧವಾಹನವು 5 ಮೀಟರ್ (16.4 ಅಡಿ) ಆಳದವರೆಗೆ ನದಿಯನ್ನು ದಾಟುವ ಸಾಮರ್ಥ್ಯವನ್ನು ಹೊಂದಿದೆ.