‘ಹಿಂದೂ ಜನಜಾಗೃತಿ ಸಮಿತಿ’ಯ ವತಿಯಿಂದ 24 ರಿಂದ 30 ಜೂನ್ ಈ ಅವಧಿಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಇದು ಅತ್ಯಂತ ಆನಂದದ ವಿಷಯವಾಗಿದೆ. ಇದಕ್ಕಾಗಿ 5 ರಾಷ್ಟ್ರಗಳಿಂದ ಹಿಂದೂಗಳ ಪ್ರಮುಖರು ಸಹಭಾಗಿ ಆಗುವವರಿದ್ದಾರೆ. ಈ ಅಧಿವೇಶನದ ಮೂಲಕ ಎಲ್ಲಾ ದೇಶಗಳಲ್ಲಿ ಹಿಂದೂ ಸಂಸ್ಕೃತಿಯ ಬಗ್ಗೆ ಪ್ರೀತಿ ಹೆಚ್ಚಾಗಲಿ, ಅದರಲ್ಲಿ ಹೊಸ ತಲೆಮಾರು ಸೇರಲಿ ಮತ್ತು ನಮ್ಮ ದೇಶದ ಬಗ್ಗೆ ಗೌರವ ಉಂಟಾಗಲಿ. ಪ್ರಭು ಶ್ರೀರಾಮನು ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ (ಅರ್ಥ: ತಾಯಿ ಮತ್ತು ಜನ್ಮಭೂಮಿ ನನಗೆ ಸ್ವರ್ಗಕ್ಕಿಂತಲೂ ಮಹತ್ತರವೆನಿಸುತ್ತದೆ), ಎಂದಿದ್ದಾರೆ. ಇದರಿಂದ ಪ್ರಭು ಶ್ರೀರಾಮನು ತಮ್ಮ ಜನ್ಮಭೂಮಿಯ ಬಗ್ಗೆ ಎಷ್ಟು ಪ್ರೀತಿ ಹೊಂದಿದ್ದರು, ಎಂಬುದನ್ನು ಕಲಿಸಿದರು. ‘ಸರ್ವೇಅತ್ರ ಸುಖಿನಃ ಸಂತು ಸರ್ವೇ ಸಂತು ನಿರಾಮಯಾಃ’ (ಅರ್ಥ: ಎಲ್ಲಾ ಜೀವಿಗಳು ಸುಖವಾಗಿರಲಿ. ಎಲ್ಲರಿಗೂ ಉತ್ತಮ ಆರೋಗ್ಯ ದೊರಕಲಿ), ಇದು ಹಿಂದೂ ಸಂಸ್ಕೃತಿಯ ಧ್ಯೇಯವಾಗಿದೆ. ನಾವು ಕೇವಲ ಹಿಂದೂಗಳಿಗೆ ಒಳಿತು ಆಗಬೇಕು ಎಂದು ಹೇಳುವುದಿಲ್ಲ. ‘ವಸುಧೈವ ಕುಟುಂಬಕಂ’ (ಅರ್ಥ: ಸಂಪೂರ್ಣ ಭೂಮಿಯೇ ನಮ್ಮ ಕುಟುಂಬ) ಇದು ನಮ್ಮ ಧ್ಯೇಯವಾಗಿದೆ. ಈ ಅಧಿವೇಶನದ ಮೂಲಕ ಎಲ್ಲೆಡೆ ಸುಖ-ಸಮಾಧಾನ ಹೆಚ್ಚಾಗಲಿ ಮತ್ತು ಯೋಜನೆ ರೂಪಿಸಲ್ಪಡಲಿ, ಅಂತೆಯೇ ಈ ಮಹೋತ್ಸವಕ್ಕೆ ನಮ್ಮ ಹಾರೈಕೆ ಇದೆ. ಭಗವಾನ್ ಶಿವ, ರಾಮಜೀ ಮತ್ತು ಶ್ರೀಕೃಷ್ಣರ ಅನುಗ್ರಹ ಯಾವಾಗಲೂ ಇರುತ್ತಿರಲಿ.’ ಎಂದು ಆಶಿರ್ವಾಧಿಸಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಮೂಲಕ ಎಲ್ಲೆಡೆ ಸುಖ-ಸಮಾಧಾನ ಹೆಚ್ಚಾಗಲಿ ! – ವಿಶ್ವಪ್ರಸನ್ನ ತೀರ್ಥ ಸ್ವಾಮಿ ಪೇಜಾವರ ಮಠ
‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಮೂಲಕ ಎಲ್ಲೆಡೆ ಸುಖ-ಸಮಾಧಾನ ಹೆಚ್ಚಾಗಲಿ ! – ವಿಶ್ವಪ್ರಸನ್ನ ತೀರ್ಥ ಸ್ವಾಮಿ ಪೇಜಾವರ ಮಠ
ಸಂಬಂಧಿತ ಲೇಖನಗಳು
- ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಒಂದು ಸಾವಿರ ಹಿಂದುತ್ವನಿಷ್ಠರಿಂದ ಉತ್ಸಾಹದ ಪಾಲ್ಗೊಳ್ಳುವಿಕೆ !
- ಹಿಂದುಗಳು ತಮ್ಮ ಜೊತೆಗೆ ಕುಟುಂಬ, ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಸಿದ್ದರಾಗಬೇಕು ! – ರಮೇಶ ಶಿಂದೆ ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
- Kerala ED : ಕೇರಳ: ಜಾರಿ ನಿರ್ದೇಶನಾಲಯದಿಂದ ಸಿಪಿಐ ಪಕ್ಷದ ಜಮೀನು ಮತ್ತು 73 ಲಕ್ಷ ರೂಪಾಯಿಯ ಬ್ಯಾಂಕ್ ಖಾತೆ ವಶ !
- ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ! – ಸಕಲ ಹಿಂದೂ ಸಮಾಜ
- NIA Raid : ತಮಿಳುನಾಡು: ಜಿಹಾದಿ ಸಂಘಟನೆ ‘ ಹಿಜ್ಬುತ್-ತಹರೀರ್ ನ 10 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ತಂಡದ ದಾಳಿ
- Muslims Urinate on Hindu Temples: ಅಲಿಗಡ (ಉತ್ತರ ಪ್ರದೇಶ)ದಲ್ಲಿ ಪ್ರಾಚೀನ ದೇವಸ್ಥಾನದ ಆವರಣದಲ್ಲಿ ಸೋಹಿಲ ಮತ್ತು ಇರ್ಫಾನ ಮೂತ್ರ ವಿಸರ್ಜಿಸಿದರು.