Temple Priest Beaten : ಬೆಂಗಳೂರಿಲ್ಲಿ ದೇವಾಲಯದ ಪೂಜಾರಿಗೆ ಅಪರಿಚಿತರಿಂದ ಹಲ್ಲೆ

ಬೆಂಗಳೂರು – ಇಲ್ಲಿನ ಹೊಸಕೋಟೆ ಪಟ್ಟಣದ ಕಣ್ಣೂರು ಪ್ರದೇಶದಲ್ಲಿ ಅಂಜನೇಯ ಸ್ವಾಮಿ ದೇವಾಲಯದ ಪೂಜಾರಿ ಆನಂದ್ ಅವರು ದೇವಾಲಯದಲ್ಲಿ ಪೂಜೆ ಮುಗಿಸಿ ಮರಳಿ ಹೋಗುತ್ತಿರುವಾಗ ಮಾರ್ಗಮಧ್ಯೆ ಅಪರಿಚಿತ ಸಮಾಜದ ಕಂಟಕರು ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಹಲ್ಲೆಯಲ್ಲಿ ಗಾಯಗೊಂಡಿದ್ದರಿಂದ ಆನಂದ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಘಟನೆ ಬಗ್ಗೆ ತನಿಖೆ ಮಾಡುತ್ತಿದ್ದಾರೆ.