Jibe On Muslims by Assam CM: ಕೇಂದ್ರದ ಭಾಜಪ ಸರಕಾರವು ಮುಸಲ್ಮಾನರಿಗೆ ಎಲ್ಲವನ್ನೂ ನೀಡಿತು; ಆದರೆ ಮುಸಲ್ಮಾನರು ಭಾಜಪಕ್ಕೆ ಮತ ನೀಡಲಿಲ್ಲ !

ಅಸ್ಸಾಂನ ಭಾಜಪ ಸರಕಾರದ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಸರಮಾರವರ ಹೇಳಿಕೆ

ಅಸ್ಸಾಂ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ

ಗೋಹತ್ತಿ (ಆಸಾಮ) – ಮುಸಲ್ಮಾನರಿಗೆ ಕೇಂದ್ರದ ಭಾಜಪ ಸರಕಾರದಿಂದ ಮನೆಗಳು, ಶೌಚಾಲಯಗಳು, ರಸ್ತೆಗಳು, ಸರಕಾರಿ ಉದ್ಯೋಗಗಳು, ಪಡಿತರ ಮತ್ತು ಪ್ರತಿ ತಿಂಗಳಿಗೆ 1,250 ರೂ. ಸಿಗುತ್ತಿತ್ತು; ಆದರೆ ಅವರು ಕಾಂಗ್ರೆಸ್‌ಗೆ ಮತ ಹಾಕಿದರು; ಏಕೆಂದರೆ ಅವರಿಗೆ ಓಲೈಕೆ ಬೇಕು. ಇಷ್ಟೇ ಅಲ್ಲ, ಅವರ ಉದ್ದೇಶ ಅಭಿವೃದ್ಧಿಯಾಗಿರದೇ ಮೋದಿಯವರನ್ನು ತೊಲಗಿಸಿ ತಮ್ಮ ಧರ್ಮದ ಪ್ರಾಬಲ್ಯವನ್ನು ಶಾಶ್ವತವಾಗಿಸುವುದಾಗಿತ್ತು, ಎಂದು ಆಸಾಮಿನ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಸರಮಾರವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳು ಮತ ಹಾಕಿದರೂ ಅವರಿಗೆ ಏನೂ ಸಿಗಲಿಲ್ಲ, ಆದರೂ ಅವರು ಪುನಃ ಮತ ನೀಡಿದರು; ಆದರೆ ಯಾರು ಈ ಹಿಂದೆಯೂ ಮತ ನೀಡಿರಲಿಲ್ಲ, ಅವರಿಗೆ ಸರಕಾರ ಎಲ್ಲವನ್ನೂ ನೀಡಿದೆ. ಈ ಮನಸ್ಥಿತಿಯನ್ನು ಮೊದಲೇ ಗುರುತಿಸಲು ಏಕೆ ಸಾಧ್ಯವಾಗಲಿಲ್ಲ ? ಹಿಂದೂಗಳಿಗೆ ಈಗಲಾದರೂ ಏನಾದರೂ ದೊರೆಯಬಹುದೇ ?