ಅಯೋಧ್ಯೆ – ಇಲ್ಲಿಯ ಶ್ರೀರಾಮ ಮಂದಿರದ ಭದ್ರತೆಗಾಗಿ ನಿಯೋಜಿಸಲಾಗಿದ್ದ ಯೋಧ ಗುಂಡಿಗೆ ಬಲಿಯಾಗಿದ್ದಾರೆ. ಜೂನ್ 19 ರ ಮುಂಜಾನೆ ಈ ಘಟನೆ ನಡೆದಿದೆ. ಈ ಯೋಧನ ಹೆಸರು ಶತ್ರುಘ್ನ ವಿಶ್ವಕರ್ಮ ಮತ್ತು ಅವನಿಗೆ 25 ವರ್ಷ ಆಗಿತ್ತು. ಈತ ಅಂಬೇಡ್ಕರ್ನಗರದ ನಿವಾಸಿಯಾಗಿದ್ದ. ಪೊಲೀಸ್ ಮೂಲಗಳ ಪ್ರಕಾರ, ಮುಂಜಾನೆ ಶ್ರೀರಾಮ ಮಂದಿರ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಬಂದಿತ್ತು. ಸಹ ಭದ್ರತಾ ಸಿಬ್ಬಂದಿ ಓಡಿ ಬಂದು ನೋಡಿದಾಗ ವಿಶ್ವಕರ್ಮನಿಗೆ ಗುಂಡು ತಗುಲಿರುವುದು ಕಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಯೋಧನ ಸಾವಿನಿಂದಾಗಿ ದೇವಾಲಯ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಪೊಲೀಸ್ ಮಹಾನಿರೀಕ್ಷಕರು ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಇದು ಆತ್ಮಹತ್ಯೆ ಅಥವಾ ಅಪಘಾತವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ಉತ್ತರ ಪ್ರದೇಶ > ಅಯೋಧ್ಯೆಯ ಶ್ರೀರಾಮ ಮಂದಿರ ಪ್ರದೇಶದಲ್ಲಿ ಗುಂಡಿನ ದಾಳಿಯಿಂದ ಯೋಧನ ಸಾವು !
ಅಯೋಧ್ಯೆಯ ಶ್ರೀರಾಮ ಮಂದಿರ ಪ್ರದೇಶದಲ್ಲಿ ಗುಂಡಿನ ದಾಳಿಯಿಂದ ಯೋಧನ ಸಾವು !
ಸಂಬಂಧಿತ ಲೇಖನಗಳು
- ಕಾಂಗ್ರೆಸ್ ನಿಂದ ಹಿಂದೂಗಳ ಶ್ರದ್ಧೆ ಮತ್ತು ಸಂಸ್ಕೃತಿಯ ಮೇಲೆ ಪದೇ ಪದೇ ಅವಮಾನ ! – ಪ್ರಧಾನಿ ಮೋದಿ
- ಕೋಲಕಾತಾದಲ್ಲಿ ವೈದ್ಯರ ಮುಷ್ಕರ 41 ದಿನಗಳ ನಂತರ ಹಿಂಪಡೆಯಲಾಯಿತು
- ಮುಂಬಯಿ ಉಚ್ಚ ನ್ಯಾಯಾಲಯದಿಂದ ಚಲನಚಿತ್ರ ಪರೀಕ್ಷಣಾ ಮಂಡಳಿಗೆ ಛೀಮಾರಿ !
- ದಾವಣಗೆರೆಯಲ್ಲಿ ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಮೇಲೆ ಮತಾಂಧ ಮುಸ್ಲಿಮರಿಂದ ಕಲ್ಲು ತೂರಾಟ
- ಬೆಂಗಳೂರಿನ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಹೇಳಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ !
- Pak Flag Whatsapp Status : ವಾಟ್ಸಾಪ್ ಸ್ಟೇಟಸ್ನಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಪೋಸ್ಟ್ ಮಾಡಿದ ತೌಶೀಫ್ ಬಂಧನ