ಶ್ರೀರಾಮಸೇನೆಯ ವತಿಯಿಂದ ಮಹಿಳೆಯರಿಗೆ ತ್ರಿಶೂಲ ದೀಕ್ಷೆ !

ಧಾರವಾಡ – ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶ್ರೀರಾಮಸೇನೆ ವತಿಯಿಂದ ಜೂನ್ 9 ರಿಂದ ಇಲ್ಲಿನ ವಿದ್ಯಾಗಿರಿ ಸಭಾಂಗಣದಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ. ಗಂಗಾಧರ ಕುಲಕರ್ಣಿ ಇವರು ಮಾಹಿತಿ ನೀಡಿದರು. ಶ್ರೀ. ಗಂಗಾಧರ ಕುಲಕರ್ಣಿಯವರು ಮಾತನಾಡುತ್ತಾ, 50 ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೀಳಗಿ ಮಠದ ವಚನಶ್ರೀ ಇವರ ವಂದನೀಯ ಉಪಸ್ತೀತಿ ಇರಲಿದೆ. ಶ್ರೀರಾಮ ಸೇನೆಯ ಸಂಸ್ಥಾಪಕ ಶ್ರೀ. ಪ್ರಮೋದ್ ಮುತಾಲಿಕ್ ಮತ್ತು ಶ್ರೀ. ಸಚಿನ್ ಕುಲಕರ್ಣಿ ಈ ಸಮಯದಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ಹಿಂದೂ ಮಹಿಳೆಯರಿಗೆ ರಕ್ಷಣೆ ನೀಡುತ್ತಿಲ್ಲ. ಹಿಂದೂ ಮಹಿಳೆಯರಿಗೆ ಸಹಾಯ ಮಾಡಲು ಶ್ರೀರಾಮ ಸೇನೆಯು ಸಹಾಯವಾಣಿ ಯೋಜನೆಯನ್ನು ಪ್ರಾರಂಭಿಸಿದೆ ಎಂದೂ ಸಹ ಅವರು ಈ ಸಮಯದಲ್ಲಿ ಹೇಳಿದರು.