ಪವೈ (ಮುಂಬಯಿ)ನಲ್ಲಿ ಅನಧಿಕೃತ ಕೊಳೆಗೇರಿಗಳನ್ನು ತೆಗೆಯಲು ಹೋದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ !

5-6 ಪೊಲೀಸ್ ಸಿಬ್ಬಂದಿಗೆ ಗಾಯ

ಮುಂಬಯಿ – ಪವೈಯ ಹಿರಾನಂದನಿ ಪ್ರದೇಶದಲ್ಲಿ ಅನಧಿಕೃತ ಕೊಳೆಗೇರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೋದ ಮುಂಬಯಿ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಕೊಳೆಗೇರಿ ನಿವಾಸಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಿದರು. ಜೂನ್ 6ರಂದು ಅನಧಿಕೃತ ಕೊಳೆಗೇರಿಗಳ ವಿರುದ್ಧ ಕ್ರಮ ಕೈಗೊಳ್ಳುವ ವೇಳೆ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದ ನಂತರ ಕೊಳೆಗೇರಿಗಳ ಮೇಲಿನ ಕ್ರಮವನ್ನು ನಿಲ್ಲಿಸಲಾಗಿದೆ. ಕಲ್ಲು ತೂರಾಟದಲ್ಲಿ 5-6 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ, ಪವೈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಕಾವಲು ಇರಿಸಲಾಗಿದ್ದು, ಇನ್ನೂ ಉದ್ವಿಗ್ನ ವಾತಾವರಣವಿದೆ.

ಸಂಪಾದಕೀಯ ನಿಲುವು

ಇಂತಹವರಿಗೆ ಕಾನೂನು ಸುವ್ಯವಸ್ಥೆಯ ಭಯವಿಲ್ಲ ಎನ್ನುವುದನ್ನು ತೋರಿಸುವ ಘಟನೆ !