
ಉತ್ತರಕಾಶಿ (ಉತ್ತರಾಖಂಡ) – ಸಹಸ್ರತಾಲ್ ಶಿಖರವನ್ನು ಏರಲು ತೆರಳಿದ್ದ 22 ಪರ್ವತಾರೋಹಿಗಳ ತಂಡದಲ್ಲಿ ಒಟ್ಟು 9 ಮಂದಿ ಹವಾಮಾನ ವೈಪರೀತ್ಯದಿಂದ ಸಾವನ್ನಪ್ಪಿದ್ದಾರೆ. 4 ಸಾವಿರದ 400 ಮೀಟರ್ ಎತ್ತರದಲ್ಲಿರುವ ಸಹಸ್ತ್ರತಾಲ್ ಶಿಖರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನವು ಕೆಟ್ಟದಾಗಿತ್ತು. ಈ ಅವಧಿಯಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಆ ಪರ್ವತಾರೋಹಿಗಳು ಶಿಖರವನ್ನು ಏರಲು ತೆರಳಿದ್ದರು. ಅವರ ಜೊತೆಯಲ್ಲಿ ಸ್ಥಳೀಯ ಮಾರ್ಗದರ್ಶಕರೊಬ್ಬರು ಇದ್ದರು. ಕೆಟ್ಟ ಹವಾಮಾನದಿಂದಾಗಿ, ಆ ಪರ್ವತಾರೋಹಿಗಳು ದಾರಿ ತಪ್ಪಿದರು. ದಟ್ಟವಾದ ಮಂಜು ಮತ್ತು ಹಿಮಪಾತದಿಂದಾಗಿ ಪರ್ವತಾರೋಹಿಗಳಿಗೆ ನಿರ್ವಾತ ಛಾವಣಿಯ ತಳದಲ್ಲಿ ರಾತ್ರಿ ಕಳೆಯಬೇಕಾಯಿತು. ಆ ಗುಂಪಿನಲ್ಲಿದ್ದ 4 ಮಹಿಳೆಯರು ಸೇರಿದಂತೆ 5 ಜನರು ಹವಾಮಾನದ ತೀವ್ರತೆಗೆ ಚಳಿಯಿಂದ ಸಾವನ್ನಪ್ಪಿದರು, ಇನ್ನು 4 ಜನರು ಕಾಣೆಯಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರಾಗಿದ್ದಾರೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !