
ಉತ್ತರಕಾಶಿ (ಉತ್ತರಾಖಂಡ) – ಸಹಸ್ರತಾಲ್ ಶಿಖರವನ್ನು ಏರಲು ತೆರಳಿದ್ದ 22 ಪರ್ವತಾರೋಹಿಗಳ ತಂಡದಲ್ಲಿ ಒಟ್ಟು 9 ಮಂದಿ ಹವಾಮಾನ ವೈಪರೀತ್ಯದಿಂದ ಸಾವನ್ನಪ್ಪಿದ್ದಾರೆ. 4 ಸಾವಿರದ 400 ಮೀಟರ್ ಎತ್ತರದಲ್ಲಿರುವ ಸಹಸ್ತ್ರತಾಲ್ ಶಿಖರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನವು ಕೆಟ್ಟದಾಗಿತ್ತು. ಈ ಅವಧಿಯಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಆ ಪರ್ವತಾರೋಹಿಗಳು ಶಿಖರವನ್ನು ಏರಲು ತೆರಳಿದ್ದರು. ಅವರ ಜೊತೆಯಲ್ಲಿ ಸ್ಥಳೀಯ ಮಾರ್ಗದರ್ಶಕರೊಬ್ಬರು ಇದ್ದರು. ಕೆಟ್ಟ ಹವಾಮಾನದಿಂದಾಗಿ, ಆ ಪರ್ವತಾರೋಹಿಗಳು ದಾರಿ ತಪ್ಪಿದರು. ದಟ್ಟವಾದ ಮಂಜು ಮತ್ತು ಹಿಮಪಾತದಿಂದಾಗಿ ಪರ್ವತಾರೋಹಿಗಳಿಗೆ ನಿರ್ವಾತ ಛಾವಣಿಯ ತಳದಲ್ಲಿ ರಾತ್ರಿ ಕಳೆಯಬೇಕಾಯಿತು. ಆ ಗುಂಪಿನಲ್ಲಿದ್ದ 4 ಮಹಿಳೆಯರು ಸೇರಿದಂತೆ 5 ಜನರು ಹವಾಮಾನದ ತೀವ್ರತೆಗೆ ಚಳಿಯಿಂದ ಸಾವನ್ನಪ್ಪಿದರು, ಇನ್ನು 4 ಜನರು ಕಾಣೆಯಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರಾಗಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ