|

ಕೋಸಿಕಲಾಂ (ಉತ್ತರ ಪ್ರದೇಶ) – ಇಲ್ಲಿನ ಪಂಜಾಬಿ ಮಾರ್ಕೆಟ್ ನ ವಾಹಿದ್ ಕುರೇಶಿ ಎಂಬ ಅಂಗಡಿಯವನು ಪ್ಲಾಸ್ಟಿಕ್ ಚೀಲಗಳ ಮೇಲೆ ‘ಪಂಜಾಬಿ ಮಾರ್ಕೆಟ್’ ಎಂದು ಬರೆಯುವ ಬದಲು ‘ಇಸ್ಲಾಮಿಕ್ ಮಾರ್ಕೆಟ್’ ಎಂದು ಮುದ್ರಿಸಿದ್ದನು. ಇದರಿಂದ ಆಕ್ರೋಶಿತಗೊಂಡ ವ್ಯಾಪಾರಸ್ಥರು ಪೊಲೀಸರಿಗೆ ತಿಳಿಸಿದರು; ಆದರೆ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಈ ಚೀಲಗಳಿಗೆ ವಿರೋಧ ವ್ಯಕ್ತಪಡಿಸಲಾಯಿತು ಆ ಬಳಿಕ ಪೊಲೀಸರ ಮೇಲೆ ಒತ್ತಡ ನಿರ್ಮಾಣವಾಯಿತು ಮತ್ತು ಅವರು ವಾಹಿದ್ ಕುರೇಶಿಯನ್ನು ಬಂಧಿಸಿದರು. ಶಾಂತಿಭಂಗ ಮಾಡಿರುವ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು ನಗರ ಪರಿಷತ್ತಿನ ತೆರಿಗೆ ಇಲಾಖೆಯಿಂದ ಅವನ ಅಂಗಡಿಯ ಮೇಲೆ ದಾಳಿ ನಡೆಸಿ ೨೫ ಕೆಜಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಪರಿಷತ್ತಿನ ಕಾರ್ಯಕಾರಿ ಅಧಿಕಾರಿ ನಿಹಾಲ ಸಿಂಗ್ ಅವರು ಈ ಬಗ್ಗೆ ಮಾತನಾಡಿ, ಯಾವುದೇ ರಸ್ತೆಯ, ಪರಿಸರದ ಅಥವಾ ಮಾರುಕಟ್ಟೆಯ ಹೆಸರನ್ನು ಬದಲಾವಣೆ ಮಾಡುವ ಅಥವಾ ಹೆಸರಿಡುವ ಅಧಿಕಾರ ಕೇವಲ ನಗರ ಪರಿಷತ್ತಿಗೆ ಮಾತ್ರ ಇದೆ. ವಾಹಿದ್ ಕುರೇಶಿಯ ಈ ಕೃತ್ಯದಿಂದ ಇಲ್ಲಿನ ವಾತಾವರಣ ಹಾಳಾಯಿತು. ಅಂಗಡಿಯವನಿಗೆ ನೋಟಿಸ್ ನೀಡಲಾಗಿದ್ದು ೩ ದಿನದಲ್ಲಿ ಉತ್ತರ ನೀಡಲು ಸೂಚಿಸಲಾಗಿದೆ. ಆ ಬಳಿಕ ಯೋಗ್ಯ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!