Himanta Biswa Sarma : ಬಿಜೆಪಿ ಗೆ ೪೦೦ ಸ್ಥಾನ ಬಂದರೆ,ಜ್ಞಾನವ್ಯಾಪಿ ಮತ್ತು ಶ್ರೀಕೃಷ್ಣ ಜನ್ಮಭೂಮಿಯಲ್ಲಿ ದೇವಸ್ಥಾನಗಳನ್ನು ಕಟ್ಟುವೆವು !

ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರಮಾ ಹೇಳಿಕೆ

ನವದೆಹಲಿ – ಕಳೆದ ಚುನಾವಣೆಯಲ್ಲಿ ನಾವು ಶ್ರೀರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳಿದ್ದೆವು. ಈ ಬಾರಿಯ ಚುನಾವಣೆಯಲ್ಲಿ ನಾವು ಶ್ರೀರಾಮಮಂದಿರ ಕಟ್ಟಿದ್ದೇವೆ ಎಂದು ಹೇಳುತ್ತಿದ್ದೇವೆ. ನಮಗೆ ೩೦೦ ಸ್ಥಾನಗಳಿದ್ದಾಗ, ನಾವು ಶ್ರೀರಾಮಮಂದಿರವನ್ನು ಕಟ್ಟಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ನಮಗೆ ೪೦೦ ಸ್ಥಾನಗಳು ಬಂದರೆ, ಮಥುರೆಯಲ್ಲಿ ಶ್ರೀಕೃಷ್ಣನ ಜನ್ಮಸ್ಥಳ ಮತ್ತು ಜ್ಷಾನವ್ಯಾಪಿ ಮಸೀದಿಯ ಜಾಗದಲ್ಲಿ ಬಾಬಾ ವಿಶ್ವನಾಥನ ಭವ್ಯ ದೇವಾಲಯವನ್ನು ಕಟ್ಟುವೆವು. ಈ ಬಾರಿ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮರಳಿ ಬರಲಿದೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರಮಾ ಅಲ್ಲಿನ ಪ್ರಚಾರ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದಾರೆ.