ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಕಾಣಿಸಿಕೊಂಡಿದ್ದಕ್ಕೆ ಆಕೆಯ ಮೇಲೆ ಹಲ್ಲೆ !

ಬೀದರ್ – ಇಲ್ಲಿನ ಬಸವಕಲ್ಯಾಣದ ಉದ್ಯಾನವನದಲ್ಲಿ ಹಿಂದೂ ಯುವಕನ ಜೊತೆಗೆ ಮುಸ್ಲಿಂ ಯುವತಿ ಇದ್ದರಿಂದ ಕೆಲ ಯುವಕರು ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಹಿಂದೂ ಯುವಕನೊಬ್ಬ ರಿಕ್ಷಾ ಚಾಲಕನಾಗಿದ್ದು, ಆತನೊಂದಿಗೆ ಮಹಿಳೆಯ ಅನೈತಿಕ ಸಂಬಂಧ ಇತ್ತು. ಆಕೆ ಮುಸ್ಲಿಮರ ಅವಮಾನ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಯುವಕರು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಈ ಹಿಂದೆ ಜನವರಿ 8, 2024 ರಂದು ರಾಜ್ಯದ ಹಾವೇರಿಯಲ್ಲಿ ಇದೇ ರೀತಿಯ ಘಟನೆ ಬೆಳಕಿಗೆ ಬಂದಿತ್ತು. ಅದರಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ಸ್ಥಳೀಯರಿಗೆ ಈ ಮಾಹಿತಿ ತಿಳಿದ ಕೂಡಲೇ ಕೆಲ ಮುಸ್ಲಿಂ ಯುವಕರು ಹಲ್ಲೆ ನಡೆಸಿ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಂದೂ ಯುವಕರೊಂದಿಗೆ ಕಾಣುವ ಮುಸಲ್ಮಾನ ಹುಡುಗಿ ಅಥವಾ ಮಹಿಳೆಯರನ್ನು ಗುರಿಯಾಗಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಯಾವಾಗಲೂ ಲವ್ ಜಿಹಾದ್ ಮೂಲಕ ಪ್ರೀತಿಯ ಬಲೆಯಲ್ಲಿ ಸಿಲುಕಿರುವ ಹಿಂದೂ ಯುವತಿಯನ್ನು ರಕ್ಷಿಸಲು ಹಿಂದೂ ಯುವಕರು ಮುಂದೆ ಬಂದಾಗಲೆಲ್ಲ ‘ಪ್ರೇಮಕ್ಕೆ ಧರ್ಮದ ಬಣ್ಣ ಹಚ್ಚಬಾರದು’, ಈ ಪ್ರಕಾರದ ಉಪದೇಶ ಮಾಡುವವರು ಈಗ ಯಾವ ಬಿಲದಲ್ಲಿ ಹೋಗಿ ಅಡಗಿಕೊಂಡಿದ್ದಾರೆ ?